ಪೂಜಗೇರಿಯಲ್ಲಿರುವ ವಿದ್ಯಾರ್ಥಿ ವಸತಿ ನಿಲಯ ಕಟ್ಟಡ ಪಾಳುಬೀಳುತ್ತಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ
ವಿನಾಯಕ ನಾಯ್ಕ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
ಹಳ್ಳಿ ಮಕ್ಕಳು ಸೌಲಭ್ಯ ವಂಚಿತ
‘ತಾಲ್ಲೂಕು ಕೇಂದ್ರದಿಂದ 35 ಕಿ.ಮೀ. ದೂರದ ಅಚವೆ ಸುಂಕಸಾಳ ಡೋಂಗ್ರಿ ಹಿಲ್ಲೂರು ಭಾಗದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿದ್ದಾರೆ. ನಿತ್ಯ ಅಲ್ಲಿಂದ ಪಟ್ಟಣದ ಕಾಲೇಜುಗಳಿಗೆ ಬಸ್ ಮೂಲಕ ಓಡಾಟ ನಡೆಸಬೇಕಾಗುತ್ತದೆ. ವಸತಿ ನಿಲಯದ ಸೌಲಭ್ಯ ಇದ್ದರೆ ಅವರ ಶಿಕ್ಷಣಕ್ಕೆ ಅನುಕೂಲ ಆಗುತ್ತಿತ್ತು. ಕೆಲವರು ನಿತ್ಯ ಓಡಾಟ ನಡೆಸಲಾಗದ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸಿದ್ದೂ ಇದೆ. ದಶಕಗಳಿಂದ ಪರಿಶಿಷ್ಟ ಪಂಗಡದ ಮಕ್ಕಳು ಸೌಲಭ್ಯ ವಂಚಿತರಾಗುತ್ತಿದ್ದರೂ ಜನಪ್ರತಿನಿಧಿಗಳು ವಸತಿ ನಿಲಯ ನಿರ್ವಹಣೆಗೆ ಗಮನಹರಿಸುತ್ತಿಲ್ಲ’ ಎಂದು ಮುಖಂಡರೊಬ್ಬರು ಆರೋಪಿಸಿದರು.