ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಸಾಹಿತ್ಯದಲ್ಲಿ ರಾಷ್ಟ್ರೀಯತೆ ಅಂದರೆ ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುವುದಾಗಿದೆ. ತಾವು ಅದೃಶ್ಯರಾಗಿದ್ದುಕೊಂಡೇ ಸಮಾಜಕ್ಕೆ ಮಹೋನ್ನತವಾದ, ಉದಾತ್ತವಾದ ವಿಚಾರವನ್ನು ಅನೇಕ ಮಹನೀಯರು ನೀಡಿದ್ದಾರೆ. ಅಂತವರನ್ನು ಪರಿಚಯಿಸುವ ಕೆಲಸವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದರು.