<p><strong>ಸಿದ್ದಾಪುರ</strong>: 2025ರ ಮುಂಗಾರು ಋತುವಿನ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತಾಲ್ಲೂಕಿನ ರೈತರು ನೋಂದಾಯಿಸಿಕೊಳ್ಳಲು ಆಗಸ್ಟ್ 11 ಅಂತಿಮ ದಿನವಾಗಿದೆ.</p><p>ಅಡಿಕೆ ಬೆಳೆಗೆ ₹51,200 ಒಟ್ಟೂ ವಿಮಾ ಮೊತ್ತ (ಪ್ರತಿ ಎಕರೆಗೆ) ಇದ್ದು, ರೈತರು ₹2,591 ಕಂತನ್ನು ಪಾವತಿಸಬೇಕು. ಅಂತೆಯೇ ಕಾಳುಮೆಣಸು ಬೆಳೆಗೆ ₹18,800 ಒಟ್ಟೂ ವಿಮಾ ಮೊತ್ತ (ಪ್ರತಿ ಎಕರೆಗೆ) ಇದ್ದು, ರೈತರು ₹952 ಕಂತನ್ನು ಪಾವತಿಸಬೇಕು.</p><p>ತಾಲ್ಲೂಕಿಗೆ ರಿಲಯನ್ಸ್ ಜನರಲ್ ಇನ್ಶೂರನ್ಸ್ ಕಂಪನಿ ಲಿ. ಅಧಿಸೂಚಿತ ವಿಮಾ ಅನುಷ್ಠಾನ ಸಂಸ್ಥೆಯಾಗಿದ್ದು, ಬೆಳೆ ಸಾಲ ಪಡೆದ ರೈತರು ಸಂಬಂಧಿತ ಬ್ಯಾಂಕ್ಗಳ ಮೂಲಕ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕ್/ ಸಾಮಾನ್ಯ ಸೇವಾಕೇಂದ್ರ / ಗ್ರಾಮ ಒನ್ ಕೇಂದ್ರಗಳ ಮೂಲಕ ಈ ಯೋಜನೆಯಡಿ ನೋಂದಾಯಿಸಬಹುದು. ಎಫ್.ಐ.ಡಿ ಕಡ್ಡಾಯವಾಗಿರುತ್ತದೆ.</p><p>ಬೆಳೆ ಸಾಲ ಪಡೆಯುವ ರೈತರು ಅಂತಿಮ ದಿನಾಂಕದ ಒಂದು ವಾರದ ಒಳಗಾಗಿ ಸಂಬಂಧಿತ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಈ ಯೋಜನೆಯಿಂದ ಹೊರಗುಳಿಯಲು ಲಿಖಿತವಾಗಿ ತಿಳಿಸಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ</strong>: 2025ರ ಮುಂಗಾರು ಋತುವಿನ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತಾಲ್ಲೂಕಿನ ರೈತರು ನೋಂದಾಯಿಸಿಕೊಳ್ಳಲು ಆಗಸ್ಟ್ 11 ಅಂತಿಮ ದಿನವಾಗಿದೆ.</p><p>ಅಡಿಕೆ ಬೆಳೆಗೆ ₹51,200 ಒಟ್ಟೂ ವಿಮಾ ಮೊತ್ತ (ಪ್ರತಿ ಎಕರೆಗೆ) ಇದ್ದು, ರೈತರು ₹2,591 ಕಂತನ್ನು ಪಾವತಿಸಬೇಕು. ಅಂತೆಯೇ ಕಾಳುಮೆಣಸು ಬೆಳೆಗೆ ₹18,800 ಒಟ್ಟೂ ವಿಮಾ ಮೊತ್ತ (ಪ್ರತಿ ಎಕರೆಗೆ) ಇದ್ದು, ರೈತರು ₹952 ಕಂತನ್ನು ಪಾವತಿಸಬೇಕು.</p><p>ತಾಲ್ಲೂಕಿಗೆ ರಿಲಯನ್ಸ್ ಜನರಲ್ ಇನ್ಶೂರನ್ಸ್ ಕಂಪನಿ ಲಿ. ಅಧಿಸೂಚಿತ ವಿಮಾ ಅನುಷ್ಠಾನ ಸಂಸ್ಥೆಯಾಗಿದ್ದು, ಬೆಳೆ ಸಾಲ ಪಡೆದ ರೈತರು ಸಂಬಂಧಿತ ಬ್ಯಾಂಕ್ಗಳ ಮೂಲಕ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕ್/ ಸಾಮಾನ್ಯ ಸೇವಾಕೇಂದ್ರ / ಗ್ರಾಮ ಒನ್ ಕೇಂದ್ರಗಳ ಮೂಲಕ ಈ ಯೋಜನೆಯಡಿ ನೋಂದಾಯಿಸಬಹುದು. ಎಫ್.ಐ.ಡಿ ಕಡ್ಡಾಯವಾಗಿರುತ್ತದೆ.</p><p>ಬೆಳೆ ಸಾಲ ಪಡೆಯುವ ರೈತರು ಅಂತಿಮ ದಿನಾಂಕದ ಒಂದು ವಾರದ ಒಳಗಾಗಿ ಸಂಬಂಧಿತ ಬ್ಯಾಂಕ್ ವ್ಯವಸ್ಥಾಪಕರ ಮೂಲಕ ಈ ಯೋಜನೆಯಿಂದ ಹೊರಗುಳಿಯಲು ಲಿಖಿತವಾಗಿ ತಿಳಿಸಬಹುದಾಗಿದೆ ಎಂದು ತೋಟಗಾರಿಕಾ ಇಲಾಖೆಯ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>