<p><strong>ಹಳಿಯಾಳ: ‘</strong>ಬಿಜೆಪಿ, ಜೆಡಿಎಸ್ ವರಿಷ್ಠರ ಜತೆ ನಿರಂತರ ಸಂಪರ್ಕ ಹೊಂದಿದ್ದು ಪಕ್ಷಕ್ಕೆ ಸೇರ್ಪಡೆಗೊಳ್ಳಲು ಎರಡೂ ಪಕ್ಷಗಳಿಗೂ ಮನವಿ ಸಲ್ಲಿಸಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಹೇಳಿದರು.</p>.<p>‘ಬಿಜೆಪಿ ನಿಯಮಾವಳಿಯಂತೆ ಪಕ್ಷದ ಸ್ಥಳೀಯ ಘಟಕಕ್ಕೆ ಪ್ರಸ್ತಾವ, ಮನವಿ ಸಲ್ಲಿಸಬೇಕು. ಹೀಗಾಗಿ ಸೋಮವಾರ ಬಿಜೆಪಿಯ ಸ್ಥಳೀಯ ನಾಯಕರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದ್ದೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದರು.</p>.<p>‘ಅಭ್ಯರ್ಥಿಯಾಗಲು ಅವಕಾಶ ನೀಡುವಂತೆ ಜೆಡಿಎಸ್, ಬಿಜೆಪಿ ಮುಖಂಡರಿಗೆ ಮನವಿ ಮಾಡಿಕೊಂಡಿದ್ದೇನೆ. ಯಾವ ಪಕ್ಷ ಅವಕಾಶ ನೀಡಲಿದೆ ಎಂಬುದನ್ನು ಗಮನಿಸಿ ನಾಲ್ಕು ದಿನದಲ್ಲಿ ನಿರ್ಧಾರ ಸ್ಪಷ್ಟಪಡಿಸಲಾಗುವುದು’ ಎಂದರು.</p>.<p>‘ಮರಡಿಗುಡ್ಡದ ಹತ್ತಿರದ ಈದ್ಗಾ ಮೈದಾನ ಹಾಗೂ ಬನ್ನಿ ಮಂಟಪ ಸೂಕ್ಮ ಪ್ರದೇಶವಾಗಿದ್ದು, ಈ ಹಿಂದೆ ತಾವು ಪುರಸಭೆಯಲ್ಲಿ ಅಧ್ಯಕ್ಷನಾಗಿದ್ದ ವೇಳೆ ಯಾವುದೇ ಧರ್ಮಕ್ಕೆ ತೊಂದರೆ ಆಗದಂತೆ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಠರಾವು ಮಾಡಲಾಗಿತ್ತು. ಪುರಸಭೆಯಿಂದ ಬನ್ನಿ ಮಂಟಪದ ಜಾಗದಲ್ಲಿ ಪೇವರ್ಸ್ ಅಳವಡಿಸಿರುವುದು ಖಂಡನೀಯ’ ಎಂದರು.</p>.<p>ಮುಖಂಡರಾದ ಯಲ್ಲಪ್ಪ ಮಾಳವಣಕರ, ಗುಲಾಬಶ್ಯಾ ಲತೀಫನವರ, ತುಕಾರಾಮ ಗೌಡ, ವಿ.ಎಂ.ಘಾಡಿ, ವಾಮನ ಮಿರಾಶಿ, ಸುರೇಶ ಶಿವಣ್ಣವರ, ಭರತ್ ಪಾಟೀಲ, ದಿನೇಶ್ ಹಳದೂಳಕರ, ಮುನ್ನಾ ಶೆಂಡೆವಾಲೆ, ಪಿ.ಎಸ್ ದಾನಪ್ಪನವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳಿಯಾಳ: ‘</strong>ಬಿಜೆಪಿ, ಜೆಡಿಎಸ್ ವರಿಷ್ಠರ ಜತೆ ನಿರಂತರ ಸಂಪರ್ಕ ಹೊಂದಿದ್ದು ಪಕ್ಷಕ್ಕೆ ಸೇರ್ಪಡೆಗೊಳ್ಳಲು ಎರಡೂ ಪಕ್ಷಗಳಿಗೂ ಮನವಿ ಸಲ್ಲಿಸಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್.ಘೋಟ್ನೇಕರ್ ಹೇಳಿದರು.</p>.<p>‘ಬಿಜೆಪಿ ನಿಯಮಾವಳಿಯಂತೆ ಪಕ್ಷದ ಸ್ಥಳೀಯ ಘಟಕಕ್ಕೆ ಪ್ರಸ್ತಾವ, ಮನವಿ ಸಲ್ಲಿಸಬೇಕು. ಹೀಗಾಗಿ ಸೋಮವಾರ ಬಿಜೆಪಿಯ ಸ್ಥಳೀಯ ನಾಯಕರನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದ್ದೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದರು.</p>.<p>‘ಅಭ್ಯರ್ಥಿಯಾಗಲು ಅವಕಾಶ ನೀಡುವಂತೆ ಜೆಡಿಎಸ್, ಬಿಜೆಪಿ ಮುಖಂಡರಿಗೆ ಮನವಿ ಮಾಡಿಕೊಂಡಿದ್ದೇನೆ. ಯಾವ ಪಕ್ಷ ಅವಕಾಶ ನೀಡಲಿದೆ ಎಂಬುದನ್ನು ಗಮನಿಸಿ ನಾಲ್ಕು ದಿನದಲ್ಲಿ ನಿರ್ಧಾರ ಸ್ಪಷ್ಟಪಡಿಸಲಾಗುವುದು’ ಎಂದರು.</p>.<p>‘ಮರಡಿಗುಡ್ಡದ ಹತ್ತಿರದ ಈದ್ಗಾ ಮೈದಾನ ಹಾಗೂ ಬನ್ನಿ ಮಂಟಪ ಸೂಕ್ಮ ಪ್ರದೇಶವಾಗಿದ್ದು, ಈ ಹಿಂದೆ ತಾವು ಪುರಸಭೆಯಲ್ಲಿ ಅಧ್ಯಕ್ಷನಾಗಿದ್ದ ವೇಳೆ ಯಾವುದೇ ಧರ್ಮಕ್ಕೆ ತೊಂದರೆ ಆಗದಂತೆ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ಠರಾವು ಮಾಡಲಾಗಿತ್ತು. ಪುರಸಭೆಯಿಂದ ಬನ್ನಿ ಮಂಟಪದ ಜಾಗದಲ್ಲಿ ಪೇವರ್ಸ್ ಅಳವಡಿಸಿರುವುದು ಖಂಡನೀಯ’ ಎಂದರು.</p>.<p>ಮುಖಂಡರಾದ ಯಲ್ಲಪ್ಪ ಮಾಳವಣಕರ, ಗುಲಾಬಶ್ಯಾ ಲತೀಫನವರ, ತುಕಾರಾಮ ಗೌಡ, ವಿ.ಎಂ.ಘಾಡಿ, ವಾಮನ ಮಿರಾಶಿ, ಸುರೇಶ ಶಿವಣ್ಣವರ, ಭರತ್ ಪಾಟೀಲ, ದಿನೇಶ್ ಹಳದೂಳಕರ, ಮುನ್ನಾ ಶೆಂಡೆವಾಲೆ, ಪಿ.ಎಸ್ ದಾನಪ್ಪನವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>