<p><strong>ಹಳಿಯಾಳ</strong>: ಪಟ್ಟಣದ ಜನರಿಗೆ ಆಶ್ರಯ ಮನೆಯ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿಯಾಗಿ 500 ಮನೆಗಳ ಮಂಜೂರಾತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಶಾಸಕ ಆರ್.ವಿ ದೇಶಪಾಂಡೆ ಮುಖ್ಯಾಧಿಕಾರಿಗೆ ಸೂಚಿಸಿದರು.</p>.<p>ಇಲ್ಲಿನ ಪುರಸಭೆ ಸಭಾ ಭವನದಲ್ಲಿ ಮಂಗಳವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಎಲ್ಲಾ ಬಡಜನರ ಶ್ರಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಯೋಜನೆಗಳನ್ನು ಅರಿತು ಸದುಪಯೋಗ ಪಡೆದುಕೊಳ್ಳಿ’ ಎಂದರು.</p>.<p>ಜಿ+2 ಅಲ್ಪ ಸಂಖ್ಯಾತರಿಗಾಗಿ ಮೀಸಲಿಟ್ಟ ಆಶ್ರಯ ಮನೆ ಮಂಜೂರಾತಿಗಾಗಿ 22 ಮನೆಗಳ ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಬಾಲಕಿಯರು ಚೀಟಿ ಎತ್ತುವ ಮೂಲಕ 5 ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಯಿತು. ಪರಿಶಿಷ್ಟ ಜಾತಿ, ಪಂಗಡದ 10 ಅರ್ಜಿಗಳ ಫಲಾನುಭವಿಗಳಲ್ಲಿ 4 ಜನರಿಗೆ ಚೀಟಿ ಎತ್ತುವ ಮೂಲಕ ಮನೆ ಹಂಚಿಕೆಗೆ ಆಯ್ಕೆ ಮಾಡಲಾಯಿತು. ಸಾಮಾನ್ಯ ಇತರೆ ವರ್ಗದ 20 ಫಲಾನುಭವಿಗಳಿಗಾಗಿ ಮೀಸಲಿಟ್ಟ ಮನೆಗಳಲ್ಲಿ 16 ಅರ್ಜಿಗಳು ಬಂದಿದ್ದು, ಎಲ್ಲ 16 ಜನರಿಗೆ ಮನೆ ಹಂಚಿಕೆ ಮಾಡಲಾಯಿತು.</p>.<p>ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ ಮಾತನಾಡಿ, ‘ಈಗಾಗಲೇ ಮನೆ ಹಂಚಿಕೆಯಾದ ಫಲಾನುಭವಿಗಳು ಡಿ.31ರ ಒಳಗಾಗಿ ಸಾಮಾನ್ಯ ವರ್ಗದವರು ₹1ಲಕ್ಷ 60 ಸಾವಿರ, ಪರಿಶಿಷ್ಟ ಜಾತಿ ಪಂಗಡದವರು ₹1 ಲಕ್ಷ ಪುರಸಭೆಗೆ ಭರಣ ಮಾಡಬೇಕು’ ಎಂದರು.</p>.<p>ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಆಶ್ರಯ ಸಮಿತಿ ಸದಸ್ಯರಾದ ಉಮೇಶ ಬೋಳಶೆಟ್ಟಿ, ಅಣ್ಣಪ್ಪಾ ಬಂಡಿವಾಡ, ರಾಜೇಶ್ವರಿ ಬಾಳೆಕುಂದ್ರಿ, ಇಜಾಜ್ ಅಹ್ಮದ್ ಮುಗದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳಿಯಾಳ</strong>: ಪಟ್ಟಣದ ಜನರಿಗೆ ಆಶ್ರಯ ಮನೆಯ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿಯಾಗಿ 500 ಮನೆಗಳ ಮಂಜೂರಾತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಶಾಸಕ ಆರ್.ವಿ ದೇಶಪಾಂಡೆ ಮುಖ್ಯಾಧಿಕಾರಿಗೆ ಸೂಚಿಸಿದರು.</p>.<p>ಇಲ್ಲಿನ ಪುರಸಭೆ ಸಭಾ ಭವನದಲ್ಲಿ ಮಂಗಳವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರ ಎಲ್ಲಾ ಬಡಜನರ ಶ್ರಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಯೋಜನೆಗಳನ್ನು ಅರಿತು ಸದುಪಯೋಗ ಪಡೆದುಕೊಳ್ಳಿ’ ಎಂದರು.</p>.<p>ಜಿ+2 ಅಲ್ಪ ಸಂಖ್ಯಾತರಿಗಾಗಿ ಮೀಸಲಿಟ್ಟ ಆಶ್ರಯ ಮನೆ ಮಂಜೂರಾತಿಗಾಗಿ 22 ಮನೆಗಳ ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಬಾಲಕಿಯರು ಚೀಟಿ ಎತ್ತುವ ಮೂಲಕ 5 ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡಲಾಯಿತು. ಪರಿಶಿಷ್ಟ ಜಾತಿ, ಪಂಗಡದ 10 ಅರ್ಜಿಗಳ ಫಲಾನುಭವಿಗಳಲ್ಲಿ 4 ಜನರಿಗೆ ಚೀಟಿ ಎತ್ತುವ ಮೂಲಕ ಮನೆ ಹಂಚಿಕೆಗೆ ಆಯ್ಕೆ ಮಾಡಲಾಯಿತು. ಸಾಮಾನ್ಯ ಇತರೆ ವರ್ಗದ 20 ಫಲಾನುಭವಿಗಳಿಗಾಗಿ ಮೀಸಲಿಟ್ಟ ಮನೆಗಳಲ್ಲಿ 16 ಅರ್ಜಿಗಳು ಬಂದಿದ್ದು, ಎಲ್ಲ 16 ಜನರಿಗೆ ಮನೆ ಹಂಚಿಕೆ ಮಾಡಲಾಯಿತು.</p>.<p>ಮುಖ್ಯಾಧಿಕಾರಿ ಅಶೋಕ ಸಾಳೇನ್ನವರ ಮಾತನಾಡಿ, ‘ಈಗಾಗಲೇ ಮನೆ ಹಂಚಿಕೆಯಾದ ಫಲಾನುಭವಿಗಳು ಡಿ.31ರ ಒಳಗಾಗಿ ಸಾಮಾನ್ಯ ವರ್ಗದವರು ₹1ಲಕ್ಷ 60 ಸಾವಿರ, ಪರಿಶಿಷ್ಟ ಜಾತಿ ಪಂಗಡದವರು ₹1 ಲಕ್ಷ ಪುರಸಭೆಗೆ ಭರಣ ಮಾಡಬೇಕು’ ಎಂದರು.</p>.<p>ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಆಶ್ರಯ ಸಮಿತಿ ಸದಸ್ಯರಾದ ಉಮೇಶ ಬೋಳಶೆಟ್ಟಿ, ಅಣ್ಣಪ್ಪಾ ಬಂಡಿವಾಡ, ರಾಜೇಶ್ವರಿ ಬಾಳೆಕುಂದ್ರಿ, ಇಜಾಜ್ ಅಹ್ಮದ್ ಮುಗದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>