ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ತರಬೇತಿಯಲ್ಲಿದ್ದ ‘ಆಸ್ಕರ್’ ಸಾವು

Published 20 ಜೂನ್ 2023, 5:44 IST
Last Updated 20 ಜೂನ್ 2023, 5:44 IST
ಅಕ್ಷರ ಗಾತ್ರ

ದಾಂಡೇಲಿ: ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ತಂದಿದ್ದ ‘ಆಸ್ಕರ್’ ಹೆಸರಿನ ಶ್ವಾನ ಅನಾರೋಗ್ಯದಿಂದ ಶನಿವಾರ ಸಂಜೆ ಮೃತಪಟ್ಟಿದೆ.

ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಿ, ಕುಳಗಿ ನೇಚರ್‌ ಕ್ಯಾಂಪ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ. ಪಶು ವೈದ್ಯರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

‘ಸಾಗವಾನಿ ಬಡ್ಡಿಯಲ್ಲಿರುವ ಹುಳ ಕಡಿತದ ಪರಿಣಾಮ ಒಂದು ತಿಂಗಳಿನಿಂದ ನಾಯಿ ಜ್ವರದಿಂದ ನರಳುತ್ತಿತ್ತು. ಶಿರಸಿ, ಬೆಳಗಾವಿ ಮತ್ತು ಗೋವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗಲಿಲ್ಲ. ತರಬೇತಿ ಪಡೆಯುತ್ತಿದ್ದ ಈ ನಾಯಿ ಮುಂದಿನ ವರ್ಷದಿಂದ ವನ್ಯಜೀವಿ ಹತ್ಯೆ, ಕಳ್ಳಸಾಗಣೆ ತಡೆಕಾರ್ಯಾಚರಣೆ ತಂಡ ಸೇರ್ಪಡೆಯಾಗುವುದಿತ್ತು’ ಎಂದು ವೈಲ್ಡ್ ಲೈಫ್ ಎಸಿಎಫ್ ಎಸ್.ಎಸ್. ನಿಂಗಾಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT