‘ಸಾಗವಾನಿ ಬಡ್ಡಿಯಲ್ಲಿರುವ ಹುಳ ಕಡಿತದ ಪರಿಣಾಮ ಒಂದು ತಿಂಗಳಿನಿಂದ ನಾಯಿ ಜ್ವರದಿಂದ ನರಳುತ್ತಿತ್ತು. ಶಿರಸಿ, ಬೆಳಗಾವಿ ಮತ್ತು ಗೋವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಸಿದರೂ ಫಲಕಾರಿಯಾಗಲಿಲ್ಲ. ತರಬೇತಿ ಪಡೆಯುತ್ತಿದ್ದ ಈ ನಾಯಿ ಮುಂದಿನ ವರ್ಷದಿಂದ ವನ್ಯಜೀವಿ ಹತ್ಯೆ, ಕಳ್ಳಸಾಗಣೆ ತಡೆಕಾರ್ಯಾಚರಣೆ ತಂಡ ಸೇರ್ಪಡೆಯಾಗುವುದಿತ್ತು’ ಎಂದು ವೈಲ್ಡ್ ಲೈಫ್ ಎಸಿಎಫ್ ಎಸ್.ಎಸ್. ನಿಂಗಾಣಿ ತಿಳಿಸಿದ್ದಾರೆ.