ಮುಂಡಗೋಡ: ದನ ಮೇಯಿಸಿಕೊಂಡು ಮರಳಿ ಮನೆಗೆ ಬರುವಾಗ ಕರಡಿ ದಾಳಿ ಮಾಡಿದ್ದರಿಂದ ರೈತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಕಾತೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗಡಿ ಗ್ರಾಮದ ಜಿಮ್ಮು ವಾಗು ತೋರವತ್(58) ಕರಡಿ ದಾಳಿಗೆ ಬಲಿಯಾಗಿದ್ದಾರೆ.
ದನಗಳನ್ನು ಮೇಯಿಸಿಕೊಂಡು ಗುರುವಾರ ಸಂಜೆ ಮರಳಿ ಮನೆಗೆ ಬರುವಾಗ, ಕರಡಿಯು ಏಕಾಏಕಿ ದಾಳಿ ಮಾಡಿ, ತಲೆ, ಕುತ್ತಿಗೆ, ಕಾಲು ಹಾಗೂ ಕೈಗೆ ಗಂಭೀರವಾಗಿ ಕಚ್ಚಿ ಗಾಯಗೊಳಿಸಿದೆ. ರಾತ್ರಿ ಆದರೂ ಮನೆಗೆ ಬಾರದಿದ್ದಾಗ, ಕುಟುಂಬಸ್ಥರು ಹುಡುಕಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ತಾಲ್ಲೂಕು ಆಸ್ಪತ್ರೆಗೆ ಡಿಎಫ್ಒ ಎಸ್.ಜಿ.ಹೆಗಡೆ ಭೇಟಿ ನೀಡಿದರು.
'ಕಾಡು ಪ್ರಾಣಿಯಿಂದ ಸಾವನ್ನಪ್ಪಿರುವ ರೈತನ ಕುಟುಂಬಕ್ಕೆ ಇಲಾಖೆಯಿಂದ ನಿಯಮಾನುಸಾರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು' ಎಂದರು.