‘ಕೋವಿಡ್ ವೇಳೆ ಎದುರಾದ ಲಾಕ್ಡೌನ್ ಪರಿಣಾಮ ಹಲವು ಬೆಳೆಗಳಿಗೆ ಮಾರುಕಟ್ಟೆ ಸಮಸ್ಯೆ ಎದುರಾಯಿತು. ಶುಂಠಿ, ಅನಾನಸ್ನಂತಹ ಬೆಳೆಗಳು ಈ ಸಾಲಿನಲ್ಲಿ ಸೇರಿದ್ದವು. ಅವುಗಳನ್ನು ಬೆಳೆದ ರೈತರು ಫಸಲು ಮಾರಾಟ ಮಾಡಲಾಗದೆ ಅವು ಗದ್ದೆ, ಮನೆ ಅಂಗಲದಲ್ಲೇ ಕೊಳೆತು ಹಾಳಾದವು. ಇದರಿಂದ ಖಿನ್ನರಾದ ಹಲವರು ಸಾವಿನ ಹಾದಿ ತುಳಿದರು. ಇದೇ ಕಾರಣಕ್ಕೆ 2021–22ರಲ್ಲಿ 13 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಲ್ಲಿ ಬಹುಪಾಲು ರೈತರು ಮುಂಡಗೋಡ ತಾಲ್ಲೂಕಿನವರು. ಅವರೆಲ್ಲ ಭತ್ತ, ಶುಂಠಿ, ಅನಾನಸ್ ಬೆಳೆದು ನಷ್ಟ ಅನುಭವಿಸಿದ್ದರು’ ಎಂದೂ ಹೇಳಿದರು.