<p><strong>ಜೊಯಿಡಾ:</strong> ಸಂಜೀವಿನಿ ಸೇವಾ ಟ್ರಸ್ಟ್ ವತಿಯಿಂದ ಕ್ರೂಗರ್ ಫೌಂಡೇಷನ್ ಕಾರವಾರ ಹಾಗೂ ಏಕಲ್ ಅಭಿಯಾನ ಸಹಯೋಗದಲ್ಲಿ ಶುಕ್ರವಾರ ಆವೇಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.</p>.<p>ಆವೇಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ ಭಗವತಿರಾಜ್ ಕಾರ್ಯಕ್ರಮ ಉದ್ಘಾಟಿಸಿದರು, ಸಂಜೀವಿನಿ ಸೇವಾ ಟ್ರಸ್ಟ್ ಸಂಸ್ಥಾಪಕ ರವಿ ರೇಡ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.</p>.<p>ಬೆಳಗಾವಿ ಏಕಲ್ ಅಭಿಯಾನದ ಡಾ.ವೈಶಾಲಿ ಕಿತ್ತೂರ, ಸ್ತ್ರೀ ರೋಗ ತಜ್ಞೆ ಡಾ.ಮೀನಾ ಕಾಮತ್, ಕಣ್ಣಿನ ತಜ್ಞ ಡಾ.ಶ್ರೇಯಸ್, ಡಾ.ವಸಂತ ಬಾಳಿಗಾ, ಡಾ.ಗಣೇಶ ವಿರಕ್ತಿಮಠ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು.</p>.<p>ಸಂಸ್ಥೆಯ ಜಯಂತ ಗಾವಡಾ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀ ರಂಗಯ್ಯ ಮುರಾರಿ, ರೇಣುಕಾ ಸಿದ್ಧಿ, ಮಹಮ್ಮದ್ ಗೌಸ , ಸಮುದಾಯ ಆರೋಗ್ಯ ಅಧಿಕಾರಿ ಬಾಲಕೃಷ್ಣ,ಶಾಲಾ ಶಿಕ್ಷಕಿ ಉಷಾ ಜೋಶಿ ಮುಂತಾದವರು ಇದ್ದರು.</p>.<p>ಶಿಬಿರದಲ್ಲಿ ಆವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಸುಮಾರು 120 ಜನರ ಆರೋಗ್ಯ ತಪಾಸಣೆ ಮಾಡಲಾಯಿತು.</p>
<p><strong>ಜೊಯಿಡಾ:</strong> ಸಂಜೀವಿನಿ ಸೇವಾ ಟ್ರಸ್ಟ್ ವತಿಯಿಂದ ಕ್ರೂಗರ್ ಫೌಂಡೇಷನ್ ಕಾರವಾರ ಹಾಗೂ ಏಕಲ್ ಅಭಿಯಾನ ಸಹಯೋಗದಲ್ಲಿ ಶುಕ್ರವಾರ ಆವೇಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.</p>.<p>ಆವೇಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ ಭಗವತಿರಾಜ್ ಕಾರ್ಯಕ್ರಮ ಉದ್ಘಾಟಿಸಿದರು, ಸಂಜೀವಿನಿ ಸೇವಾ ಟ್ರಸ್ಟ್ ಸಂಸ್ಥಾಪಕ ರವಿ ರೇಡ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.</p>.<p>ಬೆಳಗಾವಿ ಏಕಲ್ ಅಭಿಯಾನದ ಡಾ.ವೈಶಾಲಿ ಕಿತ್ತೂರ, ಸ್ತ್ರೀ ರೋಗ ತಜ್ಞೆ ಡಾ.ಮೀನಾ ಕಾಮತ್, ಕಣ್ಣಿನ ತಜ್ಞ ಡಾ.ಶ್ರೇಯಸ್, ಡಾ.ವಸಂತ ಬಾಳಿಗಾ, ಡಾ.ಗಣೇಶ ವಿರಕ್ತಿಮಠ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು.</p>.<p>ಸಂಸ್ಥೆಯ ಜಯಂತ ಗಾವಡಾ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀ ರಂಗಯ್ಯ ಮುರಾರಿ, ರೇಣುಕಾ ಸಿದ್ಧಿ, ಮಹಮ್ಮದ್ ಗೌಸ , ಸಮುದಾಯ ಆರೋಗ್ಯ ಅಧಿಕಾರಿ ಬಾಲಕೃಷ್ಣ,ಶಾಲಾ ಶಿಕ್ಷಕಿ ಉಷಾ ಜೋಶಿ ಮುಂತಾದವರು ಇದ್ದರು.</p>.<p>ಶಿಬಿರದಲ್ಲಿ ಆವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಸುಮಾರು 120 ಜನರ ಆರೋಗ್ಯ ತಪಾಸಣೆ ಮಾಡಲಾಯಿತು.</p>