ಡಿಸೆಂಬರ್ ತಿಂಗಳು ಮುಗಿಯುತ್ತ ಬಂದರೂ ಬನವಾಸಿ ಕದಂಬೋತ್ಸವದ ಸುದ್ದಿಯೇ ಇಲ್ಲ. ಕೂಡಲೇ ಉತ್ಸವಾಚರಣೆ ಬಗ್ಗೆ ಪೂರ್ವ ಸಿದ್ಧತೆ ಪ್ರಾರಂಭಿಸಬೇಕು
ಸುರೇಶ ನಾಯ್ಕ ಬನವಾಸಿ
ಕದಂಬೋತ್ಸವ ಆಚರಣೆ ಸಂಬಂಧ ಸರ್ಕಾರದ ಗಮನ ಸೆಳೆಯುವ ಕಾರ್ಯ ಮಾಡಲಾಗುವುದು. ನಿಶ್ಚಿತವಾಗಿ ಕದಂಬೋತ್ಸವ ಆಚರಿಸಲಾಗುವುದು
ಶಿವರಾಮ ಹೆಬ್ಬಾರ್ ಶಾಸಕ ಯಲ್ಲಾಪುರ
ಕಲಾವಿದರ ₹46 ಲಕ್ಷ ಬಾಕಿ
ಕದಂಬೋತ್ಸವದ ಸಾಂಸ್ಕೃತಿಕ ಸಂಭ್ರಮಕ್ಕೆ ರಾಜ್ಯಮಟ್ಟದ ಕಲಾವಿದರನ್ನು ಕರೆ ತರಲು ರಾಜ್ ಈವೆಂಟ್ ಎಂಬುವವರಿಗೆ ಗುತ್ತಿಗೆ ನೀಡಿದ್ದು ಅವರು ರಾಜ್ಯಮಟ್ಟದ ಕಲಾವಿದರನ್ನು ಕರೆತಂದು ಕದಂಬೋತ್ಸವದಲ್ಲಿ ಕಾರ್ಯಕ್ರಮದ ಮೂಲಕ ಸಾರ್ವಜನಿಕರನ್ನು ಆಕರ್ಷಿಸಿದ್ದರು. ಆದರೆ ರಾಜ್ ಈವೆಂಟ್ನ ಕಲಾವಿದರಿಗೆ ನೀಡಬೇಕಾದ ₹46 ಲಕ್ಷ ಮೊತ್ತವನ್ನು ವರ್ಷ ಕಳೆದರೂ ಇದುವರೆಗೂ ಉತ್ತರ ಕನ್ನಡ ಜಿಲ್ಲಾಡಳಿತ ನೀಡಿಲ್ಲ. ಈ ಕುರಿತು ಗುತ್ತಿಗೆ ಪಡೆದವರು ಕೂಡಲೇ ಹಣ ಬಿಡುಗಡೆಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಹ ನೀಡಿದ್ದಾರೆ.