‘ತಾಲ್ಲೂಕು ಆಡಳಿತದಿಂದ ಕುಡಿಯುವ ನೀರು ಪೂರೈಕೆಗೆ ಖಾಸಗಿ ಟ್ಯಾಂಕರ್ಗಳಿಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಟ್ಯಾಂಕರ್ಗಳಿಗೆ ಜಿಪಿಎಸ್ ಕಡ್ಡಾಯ ಮಾನದಂಡ ಇರಲಿಲ್ಲ. ಹೀಗಾಗಿ ಹಲವು ಜನರು ಭಾಗವಹಿಸಿದ್ದರು. ಆದರೆ ಟೆಂಡರ್ನಲ್ಲಿ ಕೇವಲ ನೀರು ಪೂರೈಕೆಗಷ್ಟೇ ಹಣ ಮೀಸಲಿಡಲಾಗಿತ್ತು. ಜತೆಗೆ, ಟ್ಯಾಂಕರ್ಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿದ್ದು, ಟ್ಯಾಂಕರ್ ಮಾಲೀಕರೇ ಸ್ವತಃ ಜಿಪಿಎಸ್ ಯಂತ್ರ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಇದರಿಂದ ಯಾರು ಕೂಡ ನೀರು ಪೂರೈಕೆಗೆ ಒಪ್ಪಿಲ್ಲ. ಕುಡಿಯುವ ನೀರಿಗೆ ಬೇಡಿಕೆ ಬಂದು 15 ದಿನ ಕಳೆದರೂ ನೀರು ಪೂರೈಸಲು ಸಾಧ್ಯವಾಗಿಲ್ಲ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.