<p><strong>ಹಳಿಯಾಳ</strong>: ಪಟ್ಟಣದಲ್ಲಿ ಭಾನುವಾರ ಸಂಜೆ ಸುರಿದ ರಭಸದ ಮಳೆಯಿಂದ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಮಾರಾಟಕ್ಕೆ ತಂದ ಗೋವಿನ ಜೋಳಕ್ಕೆ ಹಾನಿಯಾಗಿದೆ.</p>.<p>ಕಳೆದ ವಾರವಷ್ಟೇ ಕೊಯ್ಲು ಮಾಡಿ ಮಾರಾಟಕ್ಕಾಗಿ ಎಪಿಎಂಸಿ ಪ್ರಾಂಗಣದಲ್ಲಿ ಶೇಖರಣೆ ಮಾಡಲಾಗಿತ್ತು. ಸೋಮವಾರ ಎಪಿಎಂಸಿ ಪ್ರಾಂಗಣದಲ್ಲಿ ರೈತರು ಗೋವಿನ ಜೋಳವನ್ನು ಅಲ್ಲಲ್ಲಿ ಒಣ ಹಾಕುತ್ತಿರುವುದು ಕಂಡುಬಂತು.</p>.<p>ತಾಲ್ಲೂಕಿನ 3,500 ಹೆಕ್ಟೇರ್ ಗೋವಿನ ಜೋಳದ ಪೈಕಿ ಕಳೆದ ತಿಂಗಳಿನಲ್ಲಿ ಸುಮಾರು 216 ಹೆಕ್ಟೇರ್ ಬೆಳೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ.</p>.<p>‘ವ್ಯಾಪಾರಿಗಳು ಕಡಿಮೆ ದರಕ್ಕೆ ಫಸಲು ಕೇಳುತ್ತಾರೆ. ಈಗ ಮಳೆಯಿಂದಾಗಿ ಕಾಳು ಒದ್ದೆಯಾಗಿ ಮೊಳಕೆ ಒಡೆದು ಕೊಳೆಯುವ ಸಾಧ್ಯತೆಯೂ ಇದೆ’ ಎಂದು ಹವಗಿ ಗ್ರಾಮದ ಮಾರುತಿ ರಾಮಾ ಬೆಳಗಾಂಕರ ಹಾಗೂ ಬಾಣಸಗೇರಿ ಗ್ರಾಮದ ಮಂಜುನಾಥ ಪಕೀರ ಮಿರಾಶಿ ಆತಂಕ ವ್ಯಕ್ತಪಡಿಸಿದರು.</p>.<p>‘ಕಷ್ಟಪಟ್ಟು ಮೂರು ನಾಲ್ಕು ತಿಂಗಳಿನಿಂದ ಬೆಳೆದ ಬೆಳೆ ಕೈ ಸೇರಿತ್ತು. ಈಗ ಮಳೆ ಬಂದು ಮತ್ತೆ ಸಮಸ್ಯೆ ಎದುರಾಗಿದೆ’ ಬಾಣಸಗೇರಿ ಗ್ರಾಮದ ನಿಂಗಪ್ಪಾ ಹೂವಪ್ಪ ಚಾಪಗಾಂವಕರ ಹಾಗೂ ಸುರೇಖಾ ನಿಂಗಪ್ಪಾ ಚಾಪಗಾಂವಕರ ಹೇಳಿದರು.</p>.<p>‘ರೈತರು ಮಳೆ ಸೂಚನೆ ನೋಡಿ ಗೋವಿನ ಜೋಳವನ್ನು ಕಟಾವು ಮಾಡಬೇಕು. ಯಾವುದೇ ಕಾರಣಕ್ಕೂ ಗಡಿಬಿಡಿ ಬೇಡ’ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳಿಯಾಳ</strong>: ಪಟ್ಟಣದಲ್ಲಿ ಭಾನುವಾರ ಸಂಜೆ ಸುರಿದ ರಭಸದ ಮಳೆಯಿಂದ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಮಾರಾಟಕ್ಕೆ ತಂದ ಗೋವಿನ ಜೋಳಕ್ಕೆ ಹಾನಿಯಾಗಿದೆ.</p>.<p>ಕಳೆದ ವಾರವಷ್ಟೇ ಕೊಯ್ಲು ಮಾಡಿ ಮಾರಾಟಕ್ಕಾಗಿ ಎಪಿಎಂಸಿ ಪ್ರಾಂಗಣದಲ್ಲಿ ಶೇಖರಣೆ ಮಾಡಲಾಗಿತ್ತು. ಸೋಮವಾರ ಎಪಿಎಂಸಿ ಪ್ರಾಂಗಣದಲ್ಲಿ ರೈತರು ಗೋವಿನ ಜೋಳವನ್ನು ಅಲ್ಲಲ್ಲಿ ಒಣ ಹಾಕುತ್ತಿರುವುದು ಕಂಡುಬಂತು.</p>.<p>ತಾಲ್ಲೂಕಿನ 3,500 ಹೆಕ್ಟೇರ್ ಗೋವಿನ ಜೋಳದ ಪೈಕಿ ಕಳೆದ ತಿಂಗಳಿನಲ್ಲಿ ಸುಮಾರು 216 ಹೆಕ್ಟೇರ್ ಬೆಳೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ.</p>.<p>‘ವ್ಯಾಪಾರಿಗಳು ಕಡಿಮೆ ದರಕ್ಕೆ ಫಸಲು ಕೇಳುತ್ತಾರೆ. ಈಗ ಮಳೆಯಿಂದಾಗಿ ಕಾಳು ಒದ್ದೆಯಾಗಿ ಮೊಳಕೆ ಒಡೆದು ಕೊಳೆಯುವ ಸಾಧ್ಯತೆಯೂ ಇದೆ’ ಎಂದು ಹವಗಿ ಗ್ರಾಮದ ಮಾರುತಿ ರಾಮಾ ಬೆಳಗಾಂಕರ ಹಾಗೂ ಬಾಣಸಗೇರಿ ಗ್ರಾಮದ ಮಂಜುನಾಥ ಪಕೀರ ಮಿರಾಶಿ ಆತಂಕ ವ್ಯಕ್ತಪಡಿಸಿದರು.</p>.<p>‘ಕಷ್ಟಪಟ್ಟು ಮೂರು ನಾಲ್ಕು ತಿಂಗಳಿನಿಂದ ಬೆಳೆದ ಬೆಳೆ ಕೈ ಸೇರಿತ್ತು. ಈಗ ಮಳೆ ಬಂದು ಮತ್ತೆ ಸಮಸ್ಯೆ ಎದುರಾಗಿದೆ’ ಬಾಣಸಗೇರಿ ಗ್ರಾಮದ ನಿಂಗಪ್ಪಾ ಹೂವಪ್ಪ ಚಾಪಗಾಂವಕರ ಹಾಗೂ ಸುರೇಖಾ ನಿಂಗಪ್ಪಾ ಚಾಪಗಾಂವಕರ ಹೇಳಿದರು.</p>.<p>‘ರೈತರು ಮಳೆ ಸೂಚನೆ ನೋಡಿ ಗೋವಿನ ಜೋಳವನ್ನು ಕಟಾವು ಮಾಡಬೇಕು. ಯಾವುದೇ ಕಾರಣಕ್ಕೂ ಗಡಿಬಿಡಿ ಬೇಡ’ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>