ಸೋಮವಾರ, 1 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಾರವಾರ: ಅವಧಿ ಮೀರಿದರೂ ಮುಗಿಯದ ಹೆದ್ದಾರಿ ಕಾಮಗಾರಿ

Published : 1 ಸೆಪ್ಟೆಂಬರ್ 2025, 4:33 IST
Last Updated : 1 ಸೆಪ್ಟೆಂಬರ್ 2025, 4:33 IST
ಫಾಲೋ ಮಾಡಿ
Comments
ಅಂಕೋಲಾ ತಾಲ್ಲೂಕಿನ ಶಿರೂರು ಸಮೀಪ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಒಂದು ಪಥದ ಮೇಲೆ ಮಣ್ಣು ಸುರಿದಿರುವುದು
ಅಂಕೋಲಾ ತಾಲ್ಲೂಕಿನ ಶಿರೂರು ಸಮೀಪ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಒಂದು ಪಥದ ಮೇಲೆ ಮಣ್ಣು ಸುರಿದಿರುವುದು
ಶಿರಸಿ–ಹಾವೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೌಡಳ್ಳಿ ಸಮೀಪ ಹತ್ತಾರು ಹೊಂಡಗಳು ಬಿದ್ದಿದ್ದು ವಾಹನ ಸವಾರರು ಸಾಗಲು ಪರದಾಡುತ್ತಿದ್ದಾರೆ
ಶಿರಸಿ–ಹಾವೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೌಡಳ್ಳಿ ಸಮೀಪ ಹತ್ತಾರು ಹೊಂಡಗಳು ಬಿದ್ದಿದ್ದು ವಾಹನ ಸವಾರರು ಸಾಗಲು ಪರದಾಡುತ್ತಿದ್ದಾರೆ
ಹೊಂಡಗಳೇ ತುಂಬಿರುವ ಹೆದ್ದಾರಿ
ಶಿರಸಿ–ಹಾವೇರಿ ರಸ್ತೆ (766ಇ)ಯಲ್ಲಿ ಸಂಚಾರ ದುಸ್ತರವಾಗಿದೆ. ಇಲ್ಲಿ ಸಂಚರಿಸುವುದು ಅಪಾಯವನ್ನು ಬೆನ್ನಿಗಂಟಿಕೊಂಡು ಓಡಾಡಿದಂತೆ ಎಂಬುದು ಬಹುತೇಕ ವಾಹನ ಸವಾರರ ಮಾತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ಅಮ್ಮಾಪುರ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಸಾಗರಮಾಲಾ ಯೋಜನೆಯಡಿ 2018ರಲ್ಲೇ ಈ ರಸ್ತೆ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಂಡಿತ್ತು. ಒಟ್ಟು 74 ಕಿ.ಮೀ ರಸ್ತೆ ವಿಸ್ತರಣೆ ಮಾಡಬೇಕಿದ್ದು ಕೇವಲ 5 ಕಿ.ಮೀ. ಮಾತ್ರ ಕಾಮಗಾರಿಯಾಗಿದೆ. ನಿರ್ವಹಣೆಯೂ ನಡೆಯದೆ ರಸ್ತೆ ಹದಗೆಟ್ಟಿದೆ. ಮಳೆಗಾಲದಲ್ಲಿ ಈ ರಸ್ತೆಯು ಅಕ್ಷರಶಃ ಕೆಸರುಗದ್ದೆಯಂತಾಗಿ ಮಾರ್ಪಟ್ಟಿದೆ. ‘ಶಿರಸಿ ನಗರದಿಂದ ದಾಸನಕೊಪ್ಪವರೆಗೂ ರಸ್ತೆಯುದ್ದಕ್ಕೂ ನೂರಾರು ಹೊಂಡಗಳು ಬಿದ್ದ ಕಾರಣ ಓಡಾಡಲು ಆಗದ ಸ್ಥಿತಿಯಿದೆ’ ಎಂಬುದು ಬಿಸಲಕೊಪ್ಪದ ಗಜಾನನ ಹೆಗಡೆ ಆರೋಪ.
ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಪರಿಸರದ ವಿಚಾರಕ್ಕೆ ದಾಖಲಾದ ಕೋರ್ಟ್ ಪ್ರಕರಣಗಳಿಂದ ನಿಗದಿತ ಅವಧಿಯಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಸಮಸ್ಯೆ ಆಗಿದೆ
ಕೆ.ಶಿವಕುಮಾರ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ
ಅಪೂರ್ಣಗೊಂಡ ರಸ್ತೆ ಕಾಮಗಾರಿಯಿಂದಾಗಿ ಅಪಘಾತಗಳು ಹೆಚ್ಚುತ್ತಿದ್ದು ಹೆದ್ದಾರಿ ಪ್ರಾಧಿಕಾರ ಶೀಘ್ರದಲ್ಲಿ ಮೂಲಸೌಕರ್ಯ ಒದಗಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು
ಮಂಜಪ್ಪ ನಾಯ್ಕ ಜಾಲಿ ನಿವಾಸಿ
ಶಿರೂರು ಭಾಗದಲ್ಲಿ ರಸ್ತೆ ಕೆಲಸ ಪೂರ್ಣಗೊಂಡಿಲ್ಲ. ಇನ್ನೂ ಹಲವೆಡೆ ಹಳೆಯ ರಸ್ತೆಯಲ್ಲೇ ವಾಹನಗಳು ಸಂಚರಿಸುತ್ತಿದ್ದು ಕಿರಿದಾದ ಮಾರ್ಗದಲ್ಲಿ ವೇಗವಾಗಿ ಸಾಗುವುದರಿಂದ ಅಪಘಾತ ಭಯ ಕಾಡುತ್ತಿದೆ
ನಾಗರಾಜ ನಾಯ್ಕ ಶಿರೂರು ನಿವಾಸಿ
ಭೂಕುಸಿತ ನಿರಂತರ
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಆರಂಭಗೊಂಡ ಬಳಿಕ ಭೂಕುಸಿತದ ಘಟನೆಗಳು ಹೆಚ್ಚಿವೆ ಎಂಬ ದೂರುಗಳಿವೆ. ಕುಮಟಾದ ತಂಡ್ರಕುಳಿ ಬರ್ಗಿ ಅಂಕೋಲಾದ ಶಿರೂರು ಹೊನ್ನಾವರದ ಕರ್ನಲ್ ಹಿಲ್ ಕಾರವಾರದ ಸಂಕ್ರುಬಾಗ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆಯಿಂದ ಗುಡ್ಡ ಕುಸಿತ ಸಂಭವಿಸಿದೆ. ಶಿರಸಿ–ಕುಮಟಾ ಹೆದ್ದಾರಿ ವಿಸ್ತರಣೆಗೆ ರಾಗಿಹೊಸಳ್ಳಿ ಭಾಗದಲ್ಲಿ ಕುಸಿತ ಉಂಟಾಗಿದ್ದರೆ ದೇವಿಮನೆ ಘಟ್ಟದಲ್ಲಿ ನಿರಂತರವಾಗಿ ಭೂಕುಸಿತ ಉಂಟಾಗುತ್ತಲೇ ಇದೆ. ‘ಹೆದ್ದಾರಿ ವಿಸ್ತರಣೆ ನೆಪದಲ್ಲಿ ಕಂಪನಿಗಳು ಗುಡ್ಡಗಳನ್ನು ಅವೈಜ್ಞಾನಿಕವಾಗಿ ಕತ್ತರಿಸುತ್ತಿವೆ. ಲಂಬಕೋನ ಮಾದರಿಯಲ್ಲಿ ಗುಡ್ಡ ಕತ್ತರಿಸುವುದರಿಂದ ಇಂತಹ ಅವಘಡಗಳು ಘಟಿಸುತ್ತಲೇ ಇರುತ್ತವೆ’ ಎಂಬುದು ಪರಿಸರವಾದಿಗಳ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT