ಶಿವರಾತ್ರಿ ಮುಗಿದ ಎರಡು ದಿನಗಳ ಬಳಿಕ ಎದುರಾಗುವ ಮಾಘ ಮಾಸದ ಅಮವಾಸ್ಯೆ ದಿನ ಸಮುದ್ರ ಸ್ನಾನ ಮಾಡಿದರೆ ಪಾಪಗಳು ಪರಿಹಾರ ಆಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಪ್ರತಿ ಬಾರಿಯಂತೆ ಈ ಬಾರಿಯೂ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಮಾಜಾಳಿ, ಚಿತ್ತಾಕುಲ, ದೇವಬಾಗ, ಅಸ್ನೋಟಿ, ಮುಡಗೇರಿ ಸೇರಿದಂತೆ ರಾಮನಾಥ ದೇವರ ಪರಿವಾರ ದೇವರುಗಳಿರುವ ಗ್ರಾಮಗಳ ವ್ಯಾಪ್ತಿಯ ಜನರು ಪಾಲ್ಗೊಂಡಿದ್ದರು.