ಮುಂದಿನ ನಾಲ್ಕು ದಿನಗಳ ಕಾಲ ಜಿಲ್ಲೆಯ ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನವು 2 ರಿಂದ 3 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಲಿದೆ. ಬಿಸಿ ಮತ್ತು ಆರ್ದೃತೆಯ ವಾತಾವರಣವೂ ಹೆಚ್ಚಲಿದ್ದು ಸೆಕೆ ಇರಲಿದೆ ಎಂದು ತಿಳಿಸಿದೆ. ತಾಪಮಾನ ಏರಿಕೆಯಾಗಲಿರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದ್ದಾರೆ.