<p><strong>ಕಾರವಾರ:</strong> ‘ಟ್ಯಾಗೋರ್ ಕಡಲತೀರದಲ್ಲಿ ಫೆ.2 ರಿಂದ 6ರ ವರೆಗೆ ಕರುನಾಡು ಕರಾವಳಿ ಉತ್ಸವ ನಡೆಯಲಿದ್ದು, ಸ್ಥಳೀಯ ಪ್ರತಿಭೆಗಳ ಜತೆಗೆ ರಾಷ್ಟ್ರಮಟ್ಟದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ’ ಎಂದು ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಎನ್.ದತ್ತಾ ತಿಳಿಸಿದರು.</p>.<p>ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.2 ರಂದು ಸಂಜೆ ಉದ್ಘಾಟನೆ ನಡೆಯಲಿದೆ. ಅಂದು ಸಂಜೆ 6 ಗಂಟೆಯಿಂದ ಸ್ಥಳೀಯ ಕಲಾವಿದರಿಂದ ನೃತ್ಯ, ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದ ಕಲಾವಿದರಿಂದ ಗಾಯನ ನಡೆಯಲಿದೆ. 3 ರಂದು ರಿದಮ್ ಹಾರ್ಟ್ ಬೀಟ್ ಸಂಸ್ಥೆಯ ನೃತ್ಯ ಪ್ರದರ್ಶನ, ದೀಪೇಶ್ ನಾಯ್ಕರಿಂದ ಸಂಗೀತ, ಚಿತ್ರಕಲೆ ಪ್ರದರ್ಶನ ನಡೆಯಲಿದೆ. ರಾತ್ರಿ ರಚಿತ್ ಅಗರವಾಲ್ ರಸಮಂಜರಿ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.</p>.<p>‘ಫೆ.4 ರಂದು ರಾತ್ರಿ ರ್ಯಾಪರ್ ಗಾಯಕ ಅಲೋಕ್ ಬಾಬು ತಂಡದಿಂದ ಗಾಯನ ನಡೆಯಲಿದೆ. ಅಂದು ಮಧ್ಯಾಹ್ನ ದಿನೇಶ್ ಹೊಳ್ಳ ನೇತೃತ್ವದಲ್ಲಿ ಕಡಲತೀರದಲ್ಲಿ ಗಾಳಿಪಟ ಸ್ಪರ್ಧೆ ನಡೆಯಲಿದೆ. 5 ರಂದು ಸಂಜೆ ಕಾಂತಾರ ಚಲನಚಿತ್ರದ ಹಾಸ್ಯ ಕಲಾವಿದರಿಂದ ಕಚಗುಳಿ ಕಾಮಿಡಿ ಶೋ, ರಾತ್ರಿ ಮೋಹಿತ್ ಚೋಪ್ರಾ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ. 6 ರಂದು ಗೋವಾ ರಾಕರ್ ಬ್ಯಾಂಡ್ ಕಾರ್ಯಕ್ರಮದೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ’ ಎಂದು ತಿಳಿಸಿದರು.</p>.<p>ಪ್ರಮುಖರಾದ ದೀಪಕ ಕುಡಾಳಕರ್, ಮದನ ಗುನಗಿ, ಪೂನಮ್ ವಿಜಯೇಂದ್ರ, ರತ್ನಾಕರ ನಾಯ್ಕ, ಅನಿಲ ನಾಯ್ಕ, ವೈಭವ ವೆರ್ಣೇಕರ್, ಸುನೀಲ ನಾಯ್ಕ, ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ‘ಟ್ಯಾಗೋರ್ ಕಡಲತೀರದಲ್ಲಿ ಫೆ.2 ರಿಂದ 6ರ ವರೆಗೆ ಕರುನಾಡು ಕರಾವಳಿ ಉತ್ಸವ ನಡೆಯಲಿದ್ದು, ಸ್ಥಳೀಯ ಪ್ರತಿಭೆಗಳ ಜತೆಗೆ ರಾಷ್ಟ್ರಮಟ್ಟದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ’ ಎಂದು ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಎನ್.ದತ್ತಾ ತಿಳಿಸಿದರು.</p>.<p>ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.2 ರಂದು ಸಂಜೆ ಉದ್ಘಾಟನೆ ನಡೆಯಲಿದೆ. ಅಂದು ಸಂಜೆ 6 ಗಂಟೆಯಿಂದ ಸ್ಥಳೀಯ ಕಲಾವಿದರಿಂದ ನೃತ್ಯ, ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದ ಕಲಾವಿದರಿಂದ ಗಾಯನ ನಡೆಯಲಿದೆ. 3 ರಂದು ರಿದಮ್ ಹಾರ್ಟ್ ಬೀಟ್ ಸಂಸ್ಥೆಯ ನೃತ್ಯ ಪ್ರದರ್ಶನ, ದೀಪೇಶ್ ನಾಯ್ಕರಿಂದ ಸಂಗೀತ, ಚಿತ್ರಕಲೆ ಪ್ರದರ್ಶನ ನಡೆಯಲಿದೆ. ರಾತ್ರಿ ರಚಿತ್ ಅಗರವಾಲ್ ರಸಮಂಜರಿ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.</p>.<p>‘ಫೆ.4 ರಂದು ರಾತ್ರಿ ರ್ಯಾಪರ್ ಗಾಯಕ ಅಲೋಕ್ ಬಾಬು ತಂಡದಿಂದ ಗಾಯನ ನಡೆಯಲಿದೆ. ಅಂದು ಮಧ್ಯಾಹ್ನ ದಿನೇಶ್ ಹೊಳ್ಳ ನೇತೃತ್ವದಲ್ಲಿ ಕಡಲತೀರದಲ್ಲಿ ಗಾಳಿಪಟ ಸ್ಪರ್ಧೆ ನಡೆಯಲಿದೆ. 5 ರಂದು ಸಂಜೆ ಕಾಂತಾರ ಚಲನಚಿತ್ರದ ಹಾಸ್ಯ ಕಲಾವಿದರಿಂದ ಕಚಗುಳಿ ಕಾಮಿಡಿ ಶೋ, ರಾತ್ರಿ ಮೋಹಿತ್ ಚೋಪ್ರಾ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ. 6 ರಂದು ಗೋವಾ ರಾಕರ್ ಬ್ಯಾಂಡ್ ಕಾರ್ಯಕ್ರಮದೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ’ ಎಂದು ತಿಳಿಸಿದರು.</p>.<p>ಪ್ರಮುಖರಾದ ದೀಪಕ ಕುಡಾಳಕರ್, ಮದನ ಗುನಗಿ, ಪೂನಮ್ ವಿಜಯೇಂದ್ರ, ರತ್ನಾಕರ ನಾಯ್ಕ, ಅನಿಲ ನಾಯ್ಕ, ವೈಭವ ವೆರ್ಣೇಕರ್, ಸುನೀಲ ನಾಯ್ಕ, ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>