<p><strong>ಕಾರವಾರ:</strong> ‘ದೇಶದ ಅಭಿವೃದ್ಧಿ, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ನ್ಯಾಯ ರಕ್ಷಣೆ ಸೇರಿದಂತೆ ದೇಶದ ಮಹತ್ವದ ಆಗುಹೋಗುಗಳಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಮಹತ್ವದ್ದಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ ಹೇಳಿದರು.</p>.<p>ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕಾಂಗ್ರೆಸ್ ಒಂದು ಪಕ್ಷ ಮಾತ್ರವಲ್ಲ, ಅದೊಂದು ಸಿದ್ಧಾಂತ. ಸಾವಿರಾರು ಜನರ ತ್ಯಾಗ, ಬಲಿದಾನದ ಫಲವಾಗಿ ಪಕ್ಷ ಬೆಳೆದಿದೆ. ಸ್ವಾಭಿಮಾನದ ಸಂಕೇತವಾಗಿ ಪಕ್ಷ ದೃಢವಾಗಿ ನಿಂತಿದೆ. ರಾಜಕೀಯ ಏಳುಬೀಳುಗಳು ಏನೇ ಇದ್ದರೂ ಕಾಂಗ್ರೆಸ್ ಪಕ್ಷಕ್ಕೆ ಸರಿಸಾಟಿಯಾಗಿ ಯಾವುದೇ ಸಂಘಟನೆ ಇಲ್ಲ. 20209ರ ಚುನಾವಣೆಗೆ ಸನ್ನದ್ಧಗೊಳ್ಳಲು ಬೂತ್ ಮಟ್ಟದಲ್ಲಿ ಸಮಿತಿ ರಚಿಸಿಕೊಂಡು ಕೆಲಸ ಮಾಡಬೇಕಿದೆ’ ಎಂದರು.</p>.<p>‘ಕಾಂಗ್ರೆಸ್ ಸಮಾಜದಲ್ಲಿನ ದಮನಿತರು, ಶೋಷಿತರಿಗೆ ಹೊಸ ಜೀವನ ಕೊಟ್ಟಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬಾಳು ಬೆಳಗಿದೆ. ಈ ವಿಷಯಗಳನ್ನು ಕಾರ್ಯಕರ್ತರು ಪ್ರತಿ ವ್ಯಕ್ತಿಗೆ ಮನದಟ್ಟು ಮಾಡುವ ಕೆಲಸ ಮಾಡಬೇಕು’ ಎಂದರು.</p>.<p>ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಅಬ್ಬಾಸ್ ತೊನ್ಸೆ, ಕೆಪಿಸಿಸಿ ಸದಸ್ಯ ಮುಜಮ್ಮಿಲ್ ಖಾಜಿ, ಅಲ್ಪಸಂಖ್ಯಾತರ ವಿಭಾಗದಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತಾ ಗಾವಂಕರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ರಾಠೋಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ್ ಕಲಗುಟ್ಕರ, ಕೆ.ಎಚ್.ಗೌಡ, ಪಾಂಡುರಂಗ ಗೌಡ, ಸದಾನಂದ ದಬಗಾರ, ಇತರರು ಪಾಲ್ಗೊಂಡಿದ್ದರು.</p>
<p><strong>ಕಾರವಾರ:</strong> ‘ದೇಶದ ಅಭಿವೃದ್ಧಿ, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ನ್ಯಾಯ ರಕ್ಷಣೆ ಸೇರಿದಂತೆ ದೇಶದ ಮಹತ್ವದ ಆಗುಹೋಗುಗಳಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಮಹತ್ವದ್ದಿದೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ ಹೇಳಿದರು.</p>.<p>ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕಾಂಗ್ರೆಸ್ ಒಂದು ಪಕ್ಷ ಮಾತ್ರವಲ್ಲ, ಅದೊಂದು ಸಿದ್ಧಾಂತ. ಸಾವಿರಾರು ಜನರ ತ್ಯಾಗ, ಬಲಿದಾನದ ಫಲವಾಗಿ ಪಕ್ಷ ಬೆಳೆದಿದೆ. ಸ್ವಾಭಿಮಾನದ ಸಂಕೇತವಾಗಿ ಪಕ್ಷ ದೃಢವಾಗಿ ನಿಂತಿದೆ. ರಾಜಕೀಯ ಏಳುಬೀಳುಗಳು ಏನೇ ಇದ್ದರೂ ಕಾಂಗ್ರೆಸ್ ಪಕ್ಷಕ್ಕೆ ಸರಿಸಾಟಿಯಾಗಿ ಯಾವುದೇ ಸಂಘಟನೆ ಇಲ್ಲ. 20209ರ ಚುನಾವಣೆಗೆ ಸನ್ನದ್ಧಗೊಳ್ಳಲು ಬೂತ್ ಮಟ್ಟದಲ್ಲಿ ಸಮಿತಿ ರಚಿಸಿಕೊಂಡು ಕೆಲಸ ಮಾಡಬೇಕಿದೆ’ ಎಂದರು.</p>.<p>‘ಕಾಂಗ್ರೆಸ್ ಸಮಾಜದಲ್ಲಿನ ದಮನಿತರು, ಶೋಷಿತರಿಗೆ ಹೊಸ ಜೀವನ ಕೊಟ್ಟಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬಾಳು ಬೆಳಗಿದೆ. ಈ ವಿಷಯಗಳನ್ನು ಕಾರ್ಯಕರ್ತರು ಪ್ರತಿ ವ್ಯಕ್ತಿಗೆ ಮನದಟ್ಟು ಮಾಡುವ ಕೆಲಸ ಮಾಡಬೇಕು’ ಎಂದರು.</p>.<p>ಕಾಂಗ್ರೆಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಅಬ್ಬಾಸ್ ತೊನ್ಸೆ, ಕೆಪಿಸಿಸಿ ಸದಸ್ಯ ಮುಜಮ್ಮಿಲ್ ಖಾಜಿ, ಅಲ್ಪಸಂಖ್ಯಾತರ ವಿಭಾಗದಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತಾ ಗಾವಂಕರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ರಾಠೋಡ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ್ ಕಲಗುಟ್ಕರ, ಕೆ.ಎಚ್.ಗೌಡ, ಪಾಂಡುರಂಗ ಗೌಡ, ಸದಾನಂದ ದಬಗಾರ, ಇತರರು ಪಾಲ್ಗೊಂಡಿದ್ದರು.</p>