ಮಕ್ಕಳಿಗೆ ನಿರಾಸೆ ತಂದ ಹಬ್ಬ: ಈ ವರ್ಷದ ಕೃಷ್ಣಾಷ್ಟಮಿ ಹಬ್ಬ ಮಕ್ಕಳಿಗೆ ನಿರಾಸೆ ಉಂಟುಮಾಡಿತು. ಈ ಹಬ್ಬದ ದಿವಸ ಪೆಟ್ಲೆ ಹೊಡೆಯುವುದು ಬಹುವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಆದರೆ ಈ ವರ್ಷ ಪೆಟ್ಲೆ ಅಂಡೆಗೆ ಉಪಯೋಗಿಸುವ ಜುಮ್ಮನ ಕಾಳು ಇನ್ನೂ ಆಗದಿರುವುದೇ ಮಕ್ಕಳು ಉತ್ಸಾಹದಿಂದ ಈ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಈ ಹಬ್ಬದಲ್ಲಿ ಪೆಟ್ಲೆ ಹೊಡೆದವನಿಗೆ ಖುಷಿಯಾದರೆ, ಹೊಡೆತ ತಿಂದವನಿಗೆ ಉರಿಯಾಗುತ್ತಿತ್ತು.