‘ಈ ಸಲ ಗಜನಿ ನೀರು ಬಿಟ್ಟಾಗ ಬಲೆಗೆ ಮಡ್ಲೆ, ಕುರಡೆ, ಹಾಲುಗುರಕ, ಹೂವಿನಸೆಳಕಾ, ಒಣಕಾಂಡಿ, ಬೈಗೆ, ಬಾಣ ಮೀನು ಹೇರಳ ಪ್ರಮಾಣದಲ್ಲಿ ಸಿಕ್ಕಿವೆ. ಹಾಲುಕೊಕ್ಕರ ಅಲ್ಪ ಪ್ರಮಾಣದಲ್ಲಿ ಸಿಕ್ಕಿದೆ. ಕಾಗಳಸಿ, ಕೆಂಸ ಮೀನು ಒಂದೂ ಬಲೆಗೆ ಬೀಳದೇ, ಹೇಳ ಹೆಸರಿಲ್ಲದಂತಾಗಿವೆ’ ಎಂದು ಮೀನು ಕೊಯ್ಲು ಗುತ್ತಿಗೆ ಪಡೆದ ಮಾಣಿಕಟ್ಟಾ ಕಗ್ಗ ಬೆಳೆಗಾರರ ಸಂಘದ ಸದಸ್ಯ ಮಂಜು ಪಟಗಾರ ತಿಳಿಸಿದರು.