<p><strong>ಮುಂಡಗೋಡ:</strong> ಸಮಾಜದ ಕಟ್ಟ ಕಡೆಯ ಬಡವರ ಮಕ್ಕಳು ಕಲಿಯುವಂತ ಜಾಗವಿದು. ಹೊಟ್ಟೆ ತುಂಬುವಷ್ಟು ಆಹಾರ ಸಿಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿದರೆ, ಯಾವ ಕಾರಣಕ್ಕೂ ಒಪ್ಪಲು ಆಗದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.</p><p>ಅವ್ಯವಸ್ಥೆಯ ಬಗ್ಗೆ ವ್ಯಾಪಕ ದೂರು ಕೇಳಿಬಂದಿರುವ ತಾಲ್ಲೂಕಿನ ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಯ ಬಗ್ಗೆ ಖಾರವಾಗಿ ಮಾತನಾಡಿದರು.</p><p>ಮಕ್ಕಳ ಬಗ್ಗೆ ಪ್ರಾಚಾರ್ಯರು ವಿಶೇಷ ಕಾಳಜಿ ವಹಿಸಬೇಕು. ಏನೇ ಕೆಟ್ಟ ಪರಿಸ್ಥಿತಿ ನಿರ್ಮಾಣ ಆದರೂ, ಅದಕ್ಕೆ ಪ್ರಾಚಾರ್ಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.</p><p>ನಮ್ಮದೇ ಮಕ್ಕಳು ಇಂತಹ ಜಾಗದಲ್ಲಿ ಕಲಿಯುತ್ತಿದ್ದರೇ ಸುಮ್ಮನೇ ಇರಲು ಆಗುತ್ತಿತ್ತೇ ಎಂದು ಪ್ರಶ್ನಿಸಿದ ಶಾಸಕರು, ವಸತಿ ನಿಲಯದ ಶೌಚಾಲಯದ ಸಮಸ್ಯೆ ಗಂಭೀರವಾಗಿದೆ. ಇನ್ನೂ ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಈ ವಸತಿ ಶಾಲೆಗೆ ಏನೆಲ್ಲ ಸೌಲಭ್ಯಗಳ ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಿ ನೀಡುವಂತೆ ತಹಶೀಲ್ದಾರ್ ರಿಗೆ ಸೂಚಿಸಿದ್ದೇನೆ. ಅಲ್ಲದೇ ನೂತನ ಕಾಲೇಜು ಕಟ್ಟಡ ಹಾಗೂ ವಸತಿ ನಿಲಯವನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು. ಇದರಿಂದ ತಕ್ಕ ಮಟ್ಟಿಗೆ ಸಮಸ್ಯೆ ಬಗೆಹರಿಯಲಿದೆ ಎಂದರು.</p><p>'ಬಡವರ ಮಕ್ಕಳು ಬದುಕಬೇಕಾದಂತ ಜಾಗವಿದು. ಅಂತಹ ಮಕ್ಕಳ ಹೊಟ್ಟೆಗೆ ಕಡಿಮೆಯಾಯಿತು ಎಂಬ ಪರಿಸ್ಥಿತಿ ಬರಲೇಬಾರದು. ಒಣಗಿದ ತರಕಾರಿ ಬಳಸಿದರೆ ಸಹಿಸಲು ಆಗುವುದಿಲ್ಲ ಎಂದು ಪ್ರಾಚಾರ್ಯರಿಗೆ ಖಡಕ್ ಆಗಿ ಹೇಳಿದರು.<br><br>ಮಧ್ಯಾಹ್ನಕ್ಕೆ ತಯಾರು ಮಾಡಲಾಗಿದ್ದ ಅಡುಗೆಯನ್ನು ಶಾಸಕ ಹೆಬ್ಬಾರ್ ಪರಿಶೀಲಿಸಿದರು. ಮೆನು ಪ್ರಕಾರ ಅಡುಗೆ ಮಾಡಲಾಗಿದೆಯೇ ಎಂದು ಮೆನು ಪಟ್ಟಿಯನ್ನು ವೀಕ್ಷಿಸಿದರು. ವಿದ್ಯಾರ್ಥಿಗಳನ್ನು ಮಾತನಾಡಿಸಿ, ಊಟದ ರುಚಿಯ ಬಗ್ಗೆ ಮಾಹಿತಿ ಪಡೆದುಕೊಂಡರು.</p><p>ತಹಶೀಲ್ದಾರ್ ಶಂಕರ ಗೌಡಿ, ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಇನ್ನಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ:</strong> ಸಮಾಜದ ಕಟ್ಟ ಕಡೆಯ ಬಡವರ ಮಕ್ಕಳು ಕಲಿಯುವಂತ ಜಾಗವಿದು. ಹೊಟ್ಟೆ ತುಂಬುವಷ್ಟು ಆಹಾರ ಸಿಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿದರೆ, ಯಾವ ಕಾರಣಕ್ಕೂ ಒಪ್ಪಲು ಆಗದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.</p><p>ಅವ್ಯವಸ್ಥೆಯ ಬಗ್ಗೆ ವ್ಯಾಪಕ ದೂರು ಕೇಳಿಬಂದಿರುವ ತಾಲ್ಲೂಕಿನ ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಯ ಬಗ್ಗೆ ಖಾರವಾಗಿ ಮಾತನಾಡಿದರು.</p><p>ಮಕ್ಕಳ ಬಗ್ಗೆ ಪ್ರಾಚಾರ್ಯರು ವಿಶೇಷ ಕಾಳಜಿ ವಹಿಸಬೇಕು. ಏನೇ ಕೆಟ್ಟ ಪರಿಸ್ಥಿತಿ ನಿರ್ಮಾಣ ಆದರೂ, ಅದಕ್ಕೆ ಪ್ರಾಚಾರ್ಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.</p><p>ನಮ್ಮದೇ ಮಕ್ಕಳು ಇಂತಹ ಜಾಗದಲ್ಲಿ ಕಲಿಯುತ್ತಿದ್ದರೇ ಸುಮ್ಮನೇ ಇರಲು ಆಗುತ್ತಿತ್ತೇ ಎಂದು ಪ್ರಶ್ನಿಸಿದ ಶಾಸಕರು, ವಸತಿ ನಿಲಯದ ಶೌಚಾಲಯದ ಸಮಸ್ಯೆ ಗಂಭೀರವಾಗಿದೆ. ಇನ್ನೂ ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಈ ವಸತಿ ಶಾಲೆಗೆ ಏನೆಲ್ಲ ಸೌಲಭ್ಯಗಳ ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಿ ನೀಡುವಂತೆ ತಹಶೀಲ್ದಾರ್ ರಿಗೆ ಸೂಚಿಸಿದ್ದೇನೆ. ಅಲ್ಲದೇ ನೂತನ ಕಾಲೇಜು ಕಟ್ಟಡ ಹಾಗೂ ವಸತಿ ನಿಲಯವನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು. ಇದರಿಂದ ತಕ್ಕ ಮಟ್ಟಿಗೆ ಸಮಸ್ಯೆ ಬಗೆಹರಿಯಲಿದೆ ಎಂದರು.</p><p>'ಬಡವರ ಮಕ್ಕಳು ಬದುಕಬೇಕಾದಂತ ಜಾಗವಿದು. ಅಂತಹ ಮಕ್ಕಳ ಹೊಟ್ಟೆಗೆ ಕಡಿಮೆಯಾಯಿತು ಎಂಬ ಪರಿಸ್ಥಿತಿ ಬರಲೇಬಾರದು. ಒಣಗಿದ ತರಕಾರಿ ಬಳಸಿದರೆ ಸಹಿಸಲು ಆಗುವುದಿಲ್ಲ ಎಂದು ಪ್ರಾಚಾರ್ಯರಿಗೆ ಖಡಕ್ ಆಗಿ ಹೇಳಿದರು.<br><br>ಮಧ್ಯಾಹ್ನಕ್ಕೆ ತಯಾರು ಮಾಡಲಾಗಿದ್ದ ಅಡುಗೆಯನ್ನು ಶಾಸಕ ಹೆಬ್ಬಾರ್ ಪರಿಶೀಲಿಸಿದರು. ಮೆನು ಪ್ರಕಾರ ಅಡುಗೆ ಮಾಡಲಾಗಿದೆಯೇ ಎಂದು ಮೆನು ಪಟ್ಟಿಯನ್ನು ವೀಕ್ಷಿಸಿದರು. ವಿದ್ಯಾರ್ಥಿಗಳನ್ನು ಮಾತನಾಡಿಸಿ, ಊಟದ ರುಚಿಯ ಬಗ್ಗೆ ಮಾಹಿತಿ ಪಡೆದುಕೊಂಡರು.</p><p>ತಹಶೀಲ್ದಾರ್ ಶಂಕರ ಗೌಡಿ, ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಇನ್ನಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>