ಅರುಣ್ ಸಾಗರ್, ‘ಈ ರೀತಿಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನುಭವ ಎಂಬುದಕ್ಕಿಂತ ಅನುಭಾವವಾಗುತ್ತದೆ. ಪಹರೆ ವೇದಿಕೆಯವರು ನಗರದ ಸ್ವಚ್ಛತೆಗಾಗಿ ಪಕ್ಷ, ವರ್ಗ, ವಯಸ್ಸಿನ ಭೇದ ಮರೆತು ಶ್ರಮಿಸುತ್ತಿದ್ದಾರೆ. ಈ ಮೂಲಕ ಸ್ವಚ್ಛ ಭಾರತ ಪರಿಕಲ್ಪನೆಗೆ ಹೂಗುಚ್ಛ ಇಟ್ಟಿದ್ದಾರೆ. ಪ್ರವಾಸಿ ತಾಣವಾಗಿರುವ ಕಾರವಾರಕ್ಕೆ ಬಂದವರು ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲಿ ಎಸೆಯುತ್ತಾರೆ. ಅವುಗಳ ಸ್ವಚ್ಛತೆಗೆ ವೇದಿಕೆ ಪರಿಶ್ರಮ ಪಡುವುದು ಬಹಳ ಸಂತೋಷದ ಕಾರ್ಯ’ ಎಂದು ಮೆಚ್ಚುಗೆ ಸೂಚಿಸಿದರು.