ಸ್ಥಳೀಯ ನಿವಾಸಿ ಸುರೇಖಾ ಬಾಂದೇಕರ ಅವರ ಮನೆಯ ಮೆಟ್ಟಿಲಿನವರೆಗೆನೀರು ನಿಂತಿತ್ತು. ಈ ಬಗ್ಗೆ ಅಳಲು ತೋಡಿಕೊಂಡ ಅವರು, ‘ಈ ಭಾಗದಲ್ಲಿ ಮೊದಲು ರಾಜಕಾಲುವೆ ಇತ್ತು. ಆದರೆ, ಈಗಅದನ್ನು ಮುಚ್ಚಿಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಇದರ ಬಗ್ಗೆ ಗ್ರಾಮ ಪಂಚಾಯ್ತಿಗೆ ದೂರಿದ್ದರೂ ಪ್ರಯೋಜನವಾಗಿಲ್ಲ. ಇದರೊಂದಿಗೆ ಹೆದ್ದಾರಿಯ ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್ಬಿ ಕೂಡ ಅವೈಜ್ಞಾನಿಕ ಕೆಲಸ ಮಾಡಿದೆ. ಇಂತಹ ನಿರ್ಲಕ್ಷ್ಯದಿಂದ ನಾವು ತೊಂದರೆ ಅನುಭವಿಸುತ್ತಿದ್ದೇವೆ’ ಎಂದರು.