ಕುಮಟಾ: ಕಳೆದ ಒಂದು ತಿಂಗಳಿಂದ ಕುಮಟಾ ತಾಲ್ಲೂಕಿನ ವಿವಿಧೆಡೆ ರಾತ್ರಿ ಹೊತ್ತು ತೆರೆದ ದನದ ಕೊಟ್ಟಿಗೆಗೆ ನುಗ್ಗಿದ ಚಿರತೆ ದನ, ಕರುಗಳನ್ನು ಕೊಂದು ಹಾಕಿದೆ. ತಾಲ್ಲೂಕಿನ ಕೊನಳ್ಳಿ, ಕೂಜಳ್ಳಿ, ಕಲ್ಲಬ್ಬೆ, ಊರಕೇರಿ, ಉಚಂಗಿ, ಧಾರೇಶ್ವರದಲ್ಲಿ ಚಿರತೆ ದಾಳಿ ಪ್ರಕರಣಗಳು ಹಚ್ಚಾಗಿವೆ.
ಈ ಬಗ್ಗೆ ಮಾಹಿತಿ ನೀಡಿದ ಕುಮಟಾ ವಲಯ ಅರಣ್ಯ ಅಧಿಕಾರಿ ಎಸ್.ಟಿ.ಪಟಗಾರ, ‘ಕೋನಳ್ಳಿ ಗ್ರಾಮದ ಕೆಂಗೇರಿಯ ಗೋಪಾಲ ನಾಯ್ಕ ಹಾಗೂ ತಿಮ್ಮಪ್ಪ ನಾಯ್ಕ ಅವರ ಮನೆಯ ಹಸುಗಳನ್ನು ಇತ್ತೀಚೆ ಚಿರತೆ ಕೊಂದು ಹಾಕಿದೆ' ಎಂದರು.