ನಗರದ ಹಬ್ಬುವಾಡದಲ್ಲಿ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಚರಂಡಿ ಉಕ್ಕಿ ಹರಿಯಿತು. ಇದರ ಪರಿಣಾಮ ರಸ್ತೆಯು ಹೊಳೆಯಂತಾಗಿತ್ತು. ಅಕ್ಕಪಕ್ಕದ ಮನೆಗಳು, ಅಂಗಡಿಗಳು ಜಲಾವೃತವಾಗಿ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸಿದರು. ದಟ್ಟವಾದ ಮೋಡ ಕವಿದ ಕಾರಣ ವಾಹನಗಳು ಮಧ್ಯಾಹ್ನವೂ ಹೆಡ್ಲೈಟ್ ಬೆಳಗಿಕೊಂಡು ಸಂಚರಿಸಬೇಕಾಯಿತು. ಒಂದು ಅಡಿಗೂ ಹೆಚ್ಚು ನೀರು ನಿಂತಿದ್ದ ಕಾರಣ ರಸ್ತೆಯಂಚು ತಿಳಿಯದೇ ವಾಹನ ಚಾಲಕರು ಆತಂಕದಲ್ಲೇ ಸಾಗಿದರು. ಕಾಳಿ ನದಿ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ಹೋಟೆಲ್ಗೆ ನೀರು ನುಗ್ಗಿ ಅವಾಂತರವಾಯಿತು.