<p><strong>ಯಲ್ಲಾಪುರ:</strong> ಪಟ್ಟಣದ ಗಣಪತಿ ಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ರಂಗಮಂದಿರ ನಿರ್ಮಾಣವಾಗಿದೆ. ಹಾನಿಯಾಗಿದ್ದ ಧ್ವಜದ ಕಟ್ಟೆ, ಆವರಣ ಗೋಡೆಯ ದುರಸ್ತಿಯಾಗಿದೆ. ಸುಣ್ಣ ಬಣ್ಣ ಕಂಡು ಕಂಗೊಳಿಸುತ್ತಿದೆ. ಅವುಗಳನ್ನು ಏ.2ರಂದು ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ.</p>.<p>ಇವೆಲ್ಲ ಸಾಧ್ಯವಾಗಿದ್ದು ಇದೇ ಶಾಲೆಯ ಒಬ್ಬರು ಶಿಕ್ಷಕರ ವೇತನದ ಹಣದಿಂದ. ಹೌದು, ಈ ಶಾಲೆಯ ಶಿಕ್ಷಕ ರಾಮಚಂದ್ರ ಐ.ನಾಯ್ಕ ಎಂಬುವವರು ತಮ್ಮ ವೇತನದ ಒಂದು ಭಾಗವನ್ನು ಶಾಲೆಯ ಅಭಿವೃದ್ಧಿಗೆ ಮೀಸಲಿಟ್ಟು ವ್ಯಯಿಸಿದ್ದಾರೆ.</p>.<p>‘ವಿದ್ಯಾಗಮ’ ಯೋಜನೆ ನೆನಪಿನಲ್ಲಿ ₹ 3 ಲಕ್ಷ ವೆಚ್ಚದಲ್ಲಿ ‘ವಿದ್ಯಾಗಮ ಕಲಾ ಮಂದಿರ’ ನಿರ್ಮಿಸಿದ್ದಾರೆ. ಶಾಲೆಯ ₹ 3 ಸಾವಿರಕ್ಕೆ ತಮ್ಮ ಕೊಡುಗೆಯ ₹ 16 ಸಾವಿರವನ್ನು ಸೇರಿಸಿ ಇತರ ಕೆಲಸಗಳನ್ನು ಮಾಡಿಸಿದ್ದಾರೆ.</p>.<p>ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಅಲೆಮಾರಿ ಗೋಸಾವಿ ಜನಾಂಗದ ಬಡ ಮಕ್ಕಳು ಈ ಶಾಲೆಯ ವಿದ್ಯಾರ್ಥಿಗಳು. 2019ರ ಆಗಸ್ಟ್ನಿಂದ ಲಾಕ್ಡೌನ್ ತೆರವಾಗುವ ತನಕವೂ ಸುಮಾರು 6,000 ಪೊಟ್ಟಣಗಳಷ್ಟು ಬೆಳಗ್ಗಿನ ಉಪಾಹಾರವನ್ನು ಅವರು ವಿತರಿಸಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ತಮ್ಮ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಬಾಳೆಹಣ್ಣನ್ನೂ ಹಂಚಿದ್ದರು. ಅವರ ಈ ಕಾರ್ಯವನ್ನು ಮಕ್ಕಳ ರಕ್ಷಣಾ ಆಯೋಗವೂ ಮೆಚ್ಚಿಕೊಂಡಿತ್ತು.</p>.<p>ಕಲಿಕೆಗೆ ನೆರವಾಗಲು ಪ್ರೊಜೆಕ್ಟರ್, ಪ್ರಿಂಟರ್, ಅಲ್ಲದೇ ಮಕ್ಕಳಲ್ಲಿ ಸಂವಹನ ಕೌಶಲವನ್ನು ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಮೈಕ್ ಮತ್ತು ಧ್ವನಿವರ್ಧಕ ಖರೀದಿಸಿದ್ದಾರೆ. ‘ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿಯ ಜೊತೆ ನೀಡಿದ ನಗದು ₹ 5 ಸಾವಿರವನ್ನು ಕೋವಿಡ್ ನಿಧಿಗೆ ನೀಡಿದ್ದಾರೆ. ಜನಜಾಗೃತಿ ಪರಿವಾರದ ಮೂಲಕ 16 ಚಿಂತನ ಸಭೆಗಳನ್ನು ನಡೆಸಿ, ಮಕ್ಕಳಲ್ಲಿ ಆತ್ಮ ಸ್ಥೈರ್ಯ ಹಾಗೂ ದೇಶ ಭಕ್ತಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.</p>.<p class="Subhead"><strong>ವಿದ್ಯಾರ್ಥಿಗಳ ದತ್ತು ಸ್ವೀಕಾರ</strong></p>.<p>ಪ್ರತಿ ತಿಂಗಳೂ ತಮ್ಮ ವೇತನದಲ್ಲಿ ಕೇಂದ್ರೀಯ ರಕ್ಷಣಾ ನಿಧಿಗೆ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ತಲಾ ₹ 500 ಕಡಿತ ಮಾಡಬೇಕೆಂದು ಬರೆದುಕೊಟ್ಟಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡಬೇಕೆಂದು ‘ವಿದ್ಯಾಗಮ ದತ್ತು ಸ್ವೀಕಾರ’ದ ಹೆಸರಿನಲ್ಲಿ ಒಟ್ಟು 12 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿದ್ದಾರೆ.</p>.<p>ತಾಲ್ಲೂಕಿನ ಗಣಪತಿ ಗಲ್ಲಿಯ ಶಾಲೆಯ ಏಳು, ಬಾಳಗಿಮನೆ ಶಾಲೆಯ ಇಬ್ಬರು, ಮೊರಾರ್ಜಿ ವಸತಿಯುತ ಶಾಲೆಯ ಒಬ್ಬ, ಸವಣಗೇರಿ ಶಾಲೆಯ ಒಬ್ಬ ಹಾಗೂ ಅಂಕೋಲಾ ಕಿತ್ತೂರು ಚನ್ನಮ್ಮ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಒಬ್ಬ ವಿದ್ಯಾರ್ಥಿ ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಎಲ್ಲರ ಪಿ.ಯು.ಸಿ.ವರೆಗಿನ ಶೈಕ್ಷಣಿಕ ಅಗತ್ಯತೆಯನ್ನು ಪೂರೈಸುವ ಹೊಣೆಯನ್ನು ರಾಮಚಂದ್ರ ವಹಿಸಿಕೊಂಡಿದ್ದಾರೆ.</p>.<p><strong>***</strong></p>.<p>ಕೋವಿಡ್ನಂತಹ ಸಂಕಷ್ಟದಲ್ಲೂ ಸರ್ಕಾರ ನಮಗೆ ಪೂರ್ಣ ಪ್ರಮಾಣದ ಸಂಬಳ ನೀಡಿದೆ. ಅದರ ಕೆಲವು ಭಾಗವನ್ನು ಶಾಲೆಗಾಗಿ ವ್ಯಯಿಸಿ ಕಲಾಮಂದಿರವನ್ನು ನಿರ್ಮಿಸಿದ್ದೇನೆ.</p>.<p><strong>– ರಾಮಚಂದ್ರ ಐ. ನಾಯ್ಕ, ಶಿಕ್ಷಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲ್ಲಾಪುರ:</strong> ಪಟ್ಟಣದ ಗಣಪತಿ ಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ರಂಗಮಂದಿರ ನಿರ್ಮಾಣವಾಗಿದೆ. ಹಾನಿಯಾಗಿದ್ದ ಧ್ವಜದ ಕಟ್ಟೆ, ಆವರಣ ಗೋಡೆಯ ದುರಸ್ತಿಯಾಗಿದೆ. ಸುಣ್ಣ ಬಣ್ಣ ಕಂಡು ಕಂಗೊಳಿಸುತ್ತಿದೆ. ಅವುಗಳನ್ನು ಏ.2ರಂದು ಸಚಿವ ಶಿವರಾಮ ಹೆಬ್ಬಾರ ಉದ್ಘಾಟಿಸಲಿದ್ದಾರೆ.</p>.<p>ಇವೆಲ್ಲ ಸಾಧ್ಯವಾಗಿದ್ದು ಇದೇ ಶಾಲೆಯ ಒಬ್ಬರು ಶಿಕ್ಷಕರ ವೇತನದ ಹಣದಿಂದ. ಹೌದು, ಈ ಶಾಲೆಯ ಶಿಕ್ಷಕ ರಾಮಚಂದ್ರ ಐ.ನಾಯ್ಕ ಎಂಬುವವರು ತಮ್ಮ ವೇತನದ ಒಂದು ಭಾಗವನ್ನು ಶಾಲೆಯ ಅಭಿವೃದ್ಧಿಗೆ ಮೀಸಲಿಟ್ಟು ವ್ಯಯಿಸಿದ್ದಾರೆ.</p>.<p>‘ವಿದ್ಯಾಗಮ’ ಯೋಜನೆ ನೆನಪಿನಲ್ಲಿ ₹ 3 ಲಕ್ಷ ವೆಚ್ಚದಲ್ಲಿ ‘ವಿದ್ಯಾಗಮ ಕಲಾ ಮಂದಿರ’ ನಿರ್ಮಿಸಿದ್ದಾರೆ. ಶಾಲೆಯ ₹ 3 ಸಾವಿರಕ್ಕೆ ತಮ್ಮ ಕೊಡುಗೆಯ ₹ 16 ಸಾವಿರವನ್ನು ಸೇರಿಸಿ ಇತರ ಕೆಲಸಗಳನ್ನು ಮಾಡಿಸಿದ್ದಾರೆ.</p>.<p>ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ ಅಲೆಮಾರಿ ಗೋಸಾವಿ ಜನಾಂಗದ ಬಡ ಮಕ್ಕಳು ಈ ಶಾಲೆಯ ವಿದ್ಯಾರ್ಥಿಗಳು. 2019ರ ಆಗಸ್ಟ್ನಿಂದ ಲಾಕ್ಡೌನ್ ತೆರವಾಗುವ ತನಕವೂ ಸುಮಾರು 6,000 ಪೊಟ್ಟಣಗಳಷ್ಟು ಬೆಳಗ್ಗಿನ ಉಪಾಹಾರವನ್ನು ಅವರು ವಿತರಿಸಿದ್ದಾರೆ. ಅಲ್ಲದೇ ಇದೇ ಸಂದರ್ಭದಲ್ಲಿ ತಮ್ಮ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಬಾಳೆಹಣ್ಣನ್ನೂ ಹಂಚಿದ್ದರು. ಅವರ ಈ ಕಾರ್ಯವನ್ನು ಮಕ್ಕಳ ರಕ್ಷಣಾ ಆಯೋಗವೂ ಮೆಚ್ಚಿಕೊಂಡಿತ್ತು.</p>.<p>ಕಲಿಕೆಗೆ ನೆರವಾಗಲು ಪ್ರೊಜೆಕ್ಟರ್, ಪ್ರಿಂಟರ್, ಅಲ್ಲದೇ ಮಕ್ಕಳಲ್ಲಿ ಸಂವಹನ ಕೌಶಲವನ್ನು ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಮೈಕ್ ಮತ್ತು ಧ್ವನಿವರ್ಧಕ ಖರೀದಿಸಿದ್ದಾರೆ. ‘ಜಿಲ್ಲಾ ಉತ್ತಮ ಶಿಕ್ಷಕ’ ಪ್ರಶಸ್ತಿಯ ಜೊತೆ ನೀಡಿದ ನಗದು ₹ 5 ಸಾವಿರವನ್ನು ಕೋವಿಡ್ ನಿಧಿಗೆ ನೀಡಿದ್ದಾರೆ. ಜನಜಾಗೃತಿ ಪರಿವಾರದ ಮೂಲಕ 16 ಚಿಂತನ ಸಭೆಗಳನ್ನು ನಡೆಸಿ, ಮಕ್ಕಳಲ್ಲಿ ಆತ್ಮ ಸ್ಥೈರ್ಯ ಹಾಗೂ ದೇಶ ಭಕ್ತಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.</p>.<p class="Subhead"><strong>ವಿದ್ಯಾರ್ಥಿಗಳ ದತ್ತು ಸ್ವೀಕಾರ</strong></p>.<p>ಪ್ರತಿ ತಿಂಗಳೂ ತಮ್ಮ ವೇತನದಲ್ಲಿ ಕೇಂದ್ರೀಯ ರಕ್ಷಣಾ ನಿಧಿಗೆ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ತಲಾ ₹ 500 ಕಡಿತ ಮಾಡಬೇಕೆಂದು ಬರೆದುಕೊಟ್ಟಿದ್ದಾರೆ. ಬಡ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡಬೇಕೆಂದು ‘ವಿದ್ಯಾಗಮ ದತ್ತು ಸ್ವೀಕಾರ’ದ ಹೆಸರಿನಲ್ಲಿ ಒಟ್ಟು 12 ವಿದ್ಯಾರ್ಥಿಗಳನ್ನು ದತ್ತು ಸ್ವೀಕರಿಸಿದ್ದಾರೆ.</p>.<p>ತಾಲ್ಲೂಕಿನ ಗಣಪತಿ ಗಲ್ಲಿಯ ಶಾಲೆಯ ಏಳು, ಬಾಳಗಿಮನೆ ಶಾಲೆಯ ಇಬ್ಬರು, ಮೊರಾರ್ಜಿ ವಸತಿಯುತ ಶಾಲೆಯ ಒಬ್ಬ, ಸವಣಗೇರಿ ಶಾಲೆಯ ಒಬ್ಬ ಹಾಗೂ ಅಂಕೋಲಾ ಕಿತ್ತೂರು ಚನ್ನಮ್ಮ ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಒಬ್ಬ ವಿದ್ಯಾರ್ಥಿ ಇದರ ಪ್ರಯೋಜನ ಪಡೆಯಲಿದ್ದಾರೆ. ಈ ಎಲ್ಲರ ಪಿ.ಯು.ಸಿ.ವರೆಗಿನ ಶೈಕ್ಷಣಿಕ ಅಗತ್ಯತೆಯನ್ನು ಪೂರೈಸುವ ಹೊಣೆಯನ್ನು ರಾಮಚಂದ್ರ ವಹಿಸಿಕೊಂಡಿದ್ದಾರೆ.</p>.<p><strong>***</strong></p>.<p>ಕೋವಿಡ್ನಂತಹ ಸಂಕಷ್ಟದಲ್ಲೂ ಸರ್ಕಾರ ನಮಗೆ ಪೂರ್ಣ ಪ್ರಮಾಣದ ಸಂಬಳ ನೀಡಿದೆ. ಅದರ ಕೆಲವು ಭಾಗವನ್ನು ಶಾಲೆಗಾಗಿ ವ್ಯಯಿಸಿ ಕಲಾಮಂದಿರವನ್ನು ನಿರ್ಮಿಸಿದ್ದೇನೆ.</p>.<p><strong>– ರಾಮಚಂದ್ರ ಐ. ನಾಯ್ಕ, ಶಿಕ್ಷಕ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>