<p><strong>ಕಾರವಾರ:</strong> ಶರಾವತಿ ಭೂಗತ ವಿದ್ಯುತ್ ಯೋಜನೆಗೆ (ಪಂಪ್ಡ್ ಸ್ಟೊರೇಜ್) ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಶರಾವತಿ ಕಣಿವೆಯಲ್ಲಿ 16,041 ಮರಗಳ ಹನನ ಆಗಲಿದ್ದು, 54.15 ಹೆಕ್ಟೇರ್ ಅರಣ್ಯ ಭೂಮಿ ಯೋಜನೆಗೆ ಬಳಕೆ ಆಗಲಿದೆ. ಇದಕ್ಕೆ ಪರ್ಯಾಯವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವನೀಕರಣಕ್ಕೆ ಭೂಮಿ ಗುರುತಿಸಲಾಗಿದೆ.</p>.<p>ಯೋಜನೆ ಜಾರಿಗೆ ತರಲಿರುವ ಕರ್ನಾಟಕ ವಿದ್ಯುತ್ ನಿಗಮದ ನಿಯಮಿತದ (ಕೆಪಿಸಿಎಲ್) ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಪ್ರದೇಶದಲ್ಲಿ ಯೋಜನೆ ಜಾರಿಗೊಳ್ಳಲಿದ್ದು, ಅಪರೂಪದ ಸಸ್ಯ ಸಂಪತ್ತು, ವನ್ಯಜೀವಿಗಳಿರುವ ಹೊನ್ನಾವರ ಅರಣ್ಯ ವಿಭಾಗದಲ್ಲೇ 13,756 ಮರಗಳು ಯೋಜನೆಗೆ ಬಲಿಯಾಗಲಿದೆ ಎಂದು ಗುರುತಿಸಲಾಗಿದೆ.</p>.<p>‘ಶರಾವತಿ ಭೂಗತ ವಿದ್ಯುತ್ ಯೋಜನೆಗೆ ಹೊನ್ನಾವರ ತಾಲ್ಲೂಕಿನ ನಗರಬಸ್ತಿಕೇರಿ, ಗೇರುಸೊಪ್ಪ, ಬೆಗೊಡಿ ಗ್ರಾಮಗಳ 24.31 ಹೆಕ್ಟೇರ್ ಖಾಸಗಿ ಜಮೀನು ಸ್ವಾಧೀನಗೊಳ್ಳಲಿದೆ. ಈ ವ್ಯಾಪ್ತಿಯಲ್ಲಿ ಕೇವಲ 6 ಮನೆಗಳು, ತಲಾ 1 ದೇವಾಲಯ ಮತ್ತು ಅಂಗನವಾಡಿಗಳಿವೆ. ಅರಣ್ಯಭೂಮಿಯನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕೆಪಿಸಿಎಲ್ ಕೇಂದ್ರ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ವಿಜಯ ವಿ.ಎಂ ಮಾಹಿತಿ ನೀಡಿದರು.</p>.<p>‘2 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಯೋಜನೆ ಇದಾಗಿರಲಿದ್ದು, ಗೇರುಸೊಪ್ಪ ಮತ್ತು ತಲಕಳಲೆ ಜಲಾಶಯಗಳನ್ನು ಬಳಸಿಕೊಳ್ಳುವ ಪರಿಣಾಮ ಹೊಸ ಜಲಾಶಯ ನಿರ್ಮಾಣದಂತಹ ಕಾಮಗಾರಿ ನಡೆಯುವುದಿಲ್ಲ. ಭೂಮಿಯ ಆಳದಲ್ಲಿ ಸುಮಾರು 7 ಕಿ.ಮೀ ದೂರದವರೆಗೆ ಸುರಂಗದ ಮೂಲಕ ನೀರನ್ನು ಹರಿಬಿಡುವ ಮತ್ತು ಅದೇ ಮಾರ್ಗದ ಮೂಲಕ ನೀರನ್ನು ಎತ್ತುವಳಿ ಮಾಡುವ ಪರಿಣಾಮ ಭೂಮಿಯ ಮೇಲ್ಮೈನಲ್ಲಿರುವ ಪರಿಸರಕ್ಕೆ ಹಾನಿ ಆಗುವುದಿಲ್ಲ’ ಎಂದರು.</p>.<p>‘ವಿದ್ಯುದಾಗಾರಗಳ ಸಂಪರ್ಕದ ರಸ್ತೆಯನ್ನು 3.5 ಮೀಟರ್ನಿಂದ 5.5 ಮೀಟರ್ಗೆ ವಿಸ್ತರಿಸಲಾಗುತ್ತದೆ. ಗೇರುಸೊಪ್ಪದಿಂದ ತಾಳಗುಪ್ಪವರೆಗಿನ 220 ಕೆವಿ ವಿದ್ಯುತ್ ತಂತಿ ಮಾರ್ಗ ಭವಿಷ್ಯದಲ್ಲಿ 400 ಕೆವಿಗೆ ಏರಿಕೆಯಾಗಲಿದ್ದು, ಆ ಮಾರ್ಗ 35 ಮೀ. ವಿಸ್ತರಣೆ ಆಗಲಿದೆ. ಆದರೆ, ಅವುಗಳಿಗೆ ಈಗಾಗಲೆ ಅಗತ್ಯದಷ್ಟು ಜಾಗದ ಲ್ಯತೆ ಇದ್ದು, ಪರಿಸರಕ್ಕೆ ಹೆಚ್ಚಿನ ಆಗದು’ ಎಂದರು.</p>.<p>ಶರಾವತಿ ಯೋಜನೆಯ ಮುಖ್ಯ ಎಂಜಿನಿಯರ್ ರಮೇಶ್, ಮಾದೇಶ್, ಅಶೋಕ್ ನಾಯಕ, ಗಿರೀಶ್ ಎಸ್.ಎಂ., ಉಮಾಪತಿ ಕೆ.ಆರ್. ಇದ್ದರು.</p>.<p><strong>ಸಿಂಗಳೀಕಗಳಿಗೆ ಕೆನೋಪಿ ನಿರ್ಮಾಣ:</strong></p><p>‘ಶರಾವತಿ ಭೂಗತ ವಿದ್ಯುತ್ ಯೋಜನೆ ಜಾರಿ ಪ್ರದೇಶದಲ್ಲಿರುವ ಅಪರೂಪದ ವನ್ಯಜೀವಿಗಳಾಗಿರುವ ಸಿಂಗಳೀಕಗಳ ಓಡಾಟಕ್ಕೆ ಅಡ್ಡಿಯಾಗದಂತೆ ಅಲ್ಲಲ್ಲಿ ಕೆನೋಪಿ (ಮೇಲ್ಸೇತುವೆ) ನಿರ್ಮಿಸಲಾಗುವುದು. ಹೊನ್ನಾವರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯೋಜನೆ ವೇಳೆ ಅನುಸರಿಸಿದ್ದ ಮಾದರಿಯಲ್ಲೇ ಈ ಯೋಜನೆ ಜಾರಿಗೆ ತರಲು ಅರಣ್ಯ ಇಲಾಖೆ ಸಲಹೆ ಆಧರಿಸಿ ಈ ಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತದೆ’ ಎಂದು ಕೆಪಿಸಿಎಲ್ ಇಇ ವಿಜಯ ವಿ.ಎಂ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಶರಾವತಿ ಭೂಗತ ವಿದ್ಯುತ್ ಯೋಜನೆಗೆ (ಪಂಪ್ಡ್ ಸ್ಟೊರೇಜ್) ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಶರಾವತಿ ಕಣಿವೆಯಲ್ಲಿ 16,041 ಮರಗಳ ಹನನ ಆಗಲಿದ್ದು, 54.15 ಹೆಕ್ಟೇರ್ ಅರಣ್ಯ ಭೂಮಿ ಯೋಜನೆಗೆ ಬಳಕೆ ಆಗಲಿದೆ. ಇದಕ್ಕೆ ಪರ್ಯಾಯವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವನೀಕರಣಕ್ಕೆ ಭೂಮಿ ಗುರುತಿಸಲಾಗಿದೆ.</p>.<p>ಯೋಜನೆ ಜಾರಿಗೆ ತರಲಿರುವ ಕರ್ನಾಟಕ ವಿದ್ಯುತ್ ನಿಗಮದ ನಿಯಮಿತದ (ಕೆಪಿಸಿಎಲ್) ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ ಪ್ರದೇಶದಲ್ಲಿ ಯೋಜನೆ ಜಾರಿಗೊಳ್ಳಲಿದ್ದು, ಅಪರೂಪದ ಸಸ್ಯ ಸಂಪತ್ತು, ವನ್ಯಜೀವಿಗಳಿರುವ ಹೊನ್ನಾವರ ಅರಣ್ಯ ವಿಭಾಗದಲ್ಲೇ 13,756 ಮರಗಳು ಯೋಜನೆಗೆ ಬಲಿಯಾಗಲಿದೆ ಎಂದು ಗುರುತಿಸಲಾಗಿದೆ.</p>.<p>‘ಶರಾವತಿ ಭೂಗತ ವಿದ್ಯುತ್ ಯೋಜನೆಗೆ ಹೊನ್ನಾವರ ತಾಲ್ಲೂಕಿನ ನಗರಬಸ್ತಿಕೇರಿ, ಗೇರುಸೊಪ್ಪ, ಬೆಗೊಡಿ ಗ್ರಾಮಗಳ 24.31 ಹೆಕ್ಟೇರ್ ಖಾಸಗಿ ಜಮೀನು ಸ್ವಾಧೀನಗೊಳ್ಳಲಿದೆ. ಈ ವ್ಯಾಪ್ತಿಯಲ್ಲಿ ಕೇವಲ 6 ಮನೆಗಳು, ತಲಾ 1 ದೇವಾಲಯ ಮತ್ತು ಅಂಗನವಾಡಿಗಳಿವೆ. ಅರಣ್ಯಭೂಮಿಯನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಕೆಪಿಸಿಎಲ್ ಕೇಂದ್ರ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ವಿಜಯ ವಿ.ಎಂ ಮಾಹಿತಿ ನೀಡಿದರು.</p>.<p>‘2 ಸಾವಿರ ಮೆಗಾ ವ್ಯಾಟ್ ಸಾಮರ್ಥ್ಯದ ಯೋಜನೆ ಇದಾಗಿರಲಿದ್ದು, ಗೇರುಸೊಪ್ಪ ಮತ್ತು ತಲಕಳಲೆ ಜಲಾಶಯಗಳನ್ನು ಬಳಸಿಕೊಳ್ಳುವ ಪರಿಣಾಮ ಹೊಸ ಜಲಾಶಯ ನಿರ್ಮಾಣದಂತಹ ಕಾಮಗಾರಿ ನಡೆಯುವುದಿಲ್ಲ. ಭೂಮಿಯ ಆಳದಲ್ಲಿ ಸುಮಾರು 7 ಕಿ.ಮೀ ದೂರದವರೆಗೆ ಸುರಂಗದ ಮೂಲಕ ನೀರನ್ನು ಹರಿಬಿಡುವ ಮತ್ತು ಅದೇ ಮಾರ್ಗದ ಮೂಲಕ ನೀರನ್ನು ಎತ್ತುವಳಿ ಮಾಡುವ ಪರಿಣಾಮ ಭೂಮಿಯ ಮೇಲ್ಮೈನಲ್ಲಿರುವ ಪರಿಸರಕ್ಕೆ ಹಾನಿ ಆಗುವುದಿಲ್ಲ’ ಎಂದರು.</p>.<p>‘ವಿದ್ಯುದಾಗಾರಗಳ ಸಂಪರ್ಕದ ರಸ್ತೆಯನ್ನು 3.5 ಮೀಟರ್ನಿಂದ 5.5 ಮೀಟರ್ಗೆ ವಿಸ್ತರಿಸಲಾಗುತ್ತದೆ. ಗೇರುಸೊಪ್ಪದಿಂದ ತಾಳಗುಪ್ಪವರೆಗಿನ 220 ಕೆವಿ ವಿದ್ಯುತ್ ತಂತಿ ಮಾರ್ಗ ಭವಿಷ್ಯದಲ್ಲಿ 400 ಕೆವಿಗೆ ಏರಿಕೆಯಾಗಲಿದ್ದು, ಆ ಮಾರ್ಗ 35 ಮೀ. ವಿಸ್ತರಣೆ ಆಗಲಿದೆ. ಆದರೆ, ಅವುಗಳಿಗೆ ಈಗಾಗಲೆ ಅಗತ್ಯದಷ್ಟು ಜಾಗದ ಲ್ಯತೆ ಇದ್ದು, ಪರಿಸರಕ್ಕೆ ಹೆಚ್ಚಿನ ಆಗದು’ ಎಂದರು.</p>.<p>ಶರಾವತಿ ಯೋಜನೆಯ ಮುಖ್ಯ ಎಂಜಿನಿಯರ್ ರಮೇಶ್, ಮಾದೇಶ್, ಅಶೋಕ್ ನಾಯಕ, ಗಿರೀಶ್ ಎಸ್.ಎಂ., ಉಮಾಪತಿ ಕೆ.ಆರ್. ಇದ್ದರು.</p>.<p><strong>ಸಿಂಗಳೀಕಗಳಿಗೆ ಕೆನೋಪಿ ನಿರ್ಮಾಣ:</strong></p><p>‘ಶರಾವತಿ ಭೂಗತ ವಿದ್ಯುತ್ ಯೋಜನೆ ಜಾರಿ ಪ್ರದೇಶದಲ್ಲಿರುವ ಅಪರೂಪದ ವನ್ಯಜೀವಿಗಳಾಗಿರುವ ಸಿಂಗಳೀಕಗಳ ಓಡಾಟಕ್ಕೆ ಅಡ್ಡಿಯಾಗದಂತೆ ಅಲ್ಲಲ್ಲಿ ಕೆನೋಪಿ (ಮೇಲ್ಸೇತುವೆ) ನಿರ್ಮಿಸಲಾಗುವುದು. ಹೊನ್ನಾವರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯೋಜನೆ ವೇಳೆ ಅನುಸರಿಸಿದ್ದ ಮಾದರಿಯಲ್ಲೇ ಈ ಯೋಜನೆ ಜಾರಿಗೆ ತರಲು ಅರಣ್ಯ ಇಲಾಖೆ ಸಲಹೆ ಆಧರಿಸಿ ಈ ಕ್ರಮವನ್ನು ಅನುಷ್ಠಾನಕ್ಕೆ ತರಲಾಗುತ್ತದೆ’ ಎಂದು ಕೆಪಿಸಿಎಲ್ ಇಇ ವಿಜಯ ವಿ.ಎಂ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>