‘ಭರತನ ನಾಟ್ಯ ಶಾಸ್ತ್ರದಲ್ಲಿ ಇಂದ್ರವಿಜಯ ತ್ರಿಪುರದಾಹ ದಕ್ಷ ಯಜ್ಞದಿಂದ ಭೂಲೋಕಕ್ಕೆ ನಾಟಕಗಳು ಬಂದವು ಎಂಬ ಪ್ರತೀತಿ ಇದೆ. ಹಿಂದಿನ ಕಾಲದಲ್ಲಿ ನಾಟಕಗಳು ಬಯಲು ಪ್ರದೇಶಗಳಲ್ಲಿ ನಡೆಯುತ್ತಿತ್ತು, ನಂತರ ಕ್ರಮೇಣ ರಂಗಭೂಮಿಗಳಲ್ಲಿ ನಡೆಯುತ್ತಾ ಬಂದವು. ಯಕ್ಷಗಾನ, ಚಲನಚಿತ್ರ, ದೂರದರ್ಶನ ಧಾರವಾಹಿಗಳಲ್ಲಿ ನಾಟಕಗಳು ಇದ್ದೇ ಇರುತ್ತದೆ. ನಾಟಕದ ದೃಶ್ಯಗಳನ್ನು ನಾವು ಪ್ರತ್ಯಕ್ಷವಾಗಿ ನೋಡುತ್ತೇವೆ. ಆದರೆ ಧಾರಾವಾಹಿ ಸಿನಿಮಾಗಳನ್ನು ಕ್ಯಾಮೆರಾ ಮೂಲಕ ದೂರದರ್ಶನದಲ್ಲಿ ನೋಡುತ್ತೇವೆ. ಕಾಳಿದಾಸ ಶೂದ್ರಕ, ಮೆಗಸ್ತನಿಸ್ ಹೀಗೆ ಹಲವಾರು ಕವಿಗಳು ನಾಟಕಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.