ಮಹಿಳೆಯರಿಗೆ ರಾಜ್ಯ ವ್ಯಾಪಿ ಬಸ್ಗಳಲ್ಲಿ ಸಂಚರಿಸಲು ಶಕ್ತಿ ಯೋಜನೆಯಡಿ ಅವಕಾಶ ನೀಡಲಾಗಿದೆ. ಇದರ ಪ್ರಯೋಜನ ಪಡೆಯುತ್ತಿರುವ ಮಹಿಳೆಯರು ತಂಡೋಪತಂಡವಾಗಿ ಶಿರಸಿಯ ಜಾತ್ರೆಗೆ ಆಗಮಿಸುತ್ತಿದ್ದಾರೆ. ಬೆಳಗಾವಿ, ಹಾವೇರಿ, ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳ ಮಹಿಳಾ ಭಕ್ತರು ಜಾತ್ರಾ ಸೇವೆಯ ಆರಂಭದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಇಷ್ಟ ದೇವಿಗೆ ಸೇವೆ ಸಲ್ಲಿಸಿ ಧನ್ಯರಾಗುತ್ತಿದ್ದಾರೆ.