'ಸಣ್ಣ ನೀರಾವರಿ ಇಲಾಖೆಯವರು ಕೆಲ ತಿಂಗಳ ಹಿಂದಷ್ಟೆ ಕೆರೆ ಕಟ್ಟೆ ಕಾಮಗಾರಿ ನಡೆಸಿದ್ದರು. ಕೋಡಿ ಬೀಳಲು ಕಾಲುವೆ ನಿರ್ಮಿಸಿರಲಿಲ್ಲ. ಮಳೆ ಹೆಚ್ಚಿರುವ ಕಾರಣ ಕೆರೆ ಭರ್ತಿಯಾಗಿ ಕಟ್ಟೆ ಅಲ್ಲಲ್ಲಿ ಒಡೆದಿದೆ. ಕಳಪೆ ಕಾಮಗಾರಿ ನಡೆದಿರುವುದು ಸ್ಪಷ್ಟವಾಗುತ್ತಿದೆ' ಎಂದು ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ ನಂದಿಕೇಶ್ವರಮಠ ಆರೋಪಿಸಿದ್ದಾರೆ.