<p>ಶಿರಸಿ: ಕೋವಿಡ್ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ವ್ಯಾಪಾರಿ ವರ್ಗಕ್ಕೆ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಚೇತರಿಕೆಯ ವಿಶ್ವಾಸ ಮೂಡಿಸಿದೆ.</p>.<p>ಸೂರ್ಯ ಮುಳುಗುತ್ತಿದ್ದಂತೆ ಜಾತ್ರೆಪೇಟೆಯ ದೃಶ್ಯ ಬದಲಾಗುತ್ತಿದೆ. ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುವ ಪೇಟೆ ಹೊಸ ಲೋಕವನ್ನು ಜನರಿಗೆ ಪರಿಚಯಿಸುತ್ತಿದೆ.</p>.<p>ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗಳಲ್ಲಿ ಒಂದೆನಿಸಿರುವ ಈ ಜಾತ್ರೆಯಲ್ಲಿ ದೇಶದ ನಾನಾ ಭಾಗಗಳಿಂದ ನೂರಾರು ವ್ಯಾಪಾರಿಗಳು ಬಂದಿದ್ದಾರೆ. ತಿಂಡಿತಿನಿಸುಗಳು, ಆಟಿಕೆಗಳು, ಮಿಠಾಯಿ, ಅಲಂಕಾರಿಕ ಸಾಮಗ್ರಿ, ಬಟ್ಟೆ ಹೀಗೆ ಹಲವು ಬಗೆಯ ಪರಿಕರಗಳ ಮಾರಾಟ ಚುರುಕಾಗಿದೆ.</p>.<p>ಕೋಣನಬಿಡಕಿ, ಕೋಟೆಕೆರೆಯಲ್ಲಿ ಸಂಜೆಯಾಗುತ್ತಿದ್ದಂತೆ ಝಗಮಗಿಸುವ ಬೆಳಕಿನೊಂದಿಗೆ ಅಮ್ಯೂಸಮೆಂಟ್ ಲೋಕ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಜಲಸಾಹಸ ಕ್ರೀಡೆಗೂ ಜನ ಮುಗಿಬೀಳುತ್ತಿದ್ದಾರೆ. ಜಾತ್ರೆಯ ಪೇಟೆ ಕಳೆದ ಎರಡು ದಿನಗಳಿಂದ ಜನದಟ್ಟಣೆಯಿಂದ ಕೂಡಿದ್ದು ಜೀವಕಳೆ ತುಂಬಿದೆ.</p>.<p>‘ಎರಡು ವರ್ಷಗಳಿಂದ ಹಲವು ಜಾತ್ರೆ, ಉತ್ಸವಗಳು ನಿಷೇಧವಾಗಿದ್ದವು. ವ್ಯಾಪಾರಿ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದವರ ಪಾಲಿಗೆ ಕರಾಳ ದಿನಗಳೇ ಅನಿವಾರ್ಯವಾಗಿತ್ತು. ಶಿರಸಿ ಜಾತ್ರೆ ಈ ನೋವನ್ನು ಮರೆಸಿದೆ. ಉತ್ತಮ ವಹಿವಾಟು ನಡೆಸುತ್ತಿದ್ದೇವೆ’ ಎಂದು ಬೊಂಬೆಗಳನ್ನು ಮಾರಾಟಕ್ಕೆ ಇಟ್ಟುಕೊಂಡಿರುವ ಕಾನ್ಪುರದ ರಫೀಕ್ ಪ್ರತಿಕ್ರಿಯಿಸಿದರು.</p>.<p>‘ವರ್ಷದಿಂದ ದುಡಿದಿದ್ದಷ್ಟು ಆದಾಯವನ್ನು ಜಾತ್ರೆಯ ಆರೇ ದಿನದಲ್ಲಿ ಸಂಪಾದಿಸಿದ್ದೇವೆ. ಈ ಹಿಂದಿನ ಎರಡು ಜಾತ್ರೆಗಳಲ್ಲೂ ವಹಿವಾಟು ನಡೆಸಿದ ಅನುಭವಕ್ಕಿಂತ ಈ ಬಾರಿ ಉತ್ತಮ ವಾತಾವರಣ ನಿರ್ಮಾಣಗೊಂಡಿದೆ. ಜನರು ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಬಿಕಾನೇರ್ ಜಿಲ್ಲೆಯಿಂದ ಬಂದಿರುವ ವ್ಯಾಪಾರಿ ಜೋಶ್ನಾ ಹೇಳಿದರು.</p>.<p>‘ಜಾತ್ರೆಪೇಟೆಯಲ್ಲಿ ಖಾದ್ಯ, ದಿನಬಳಕೆ ಸಲಕರಣೆ, ಅಲಂಕಾರಿಕ ಸಾಮಗ್ರಿ ಸೇರಿದಂತೆ ಬಹುತೇಕ ವಸ್ತುಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ’ ಎಂದು ಪ್ರವಾಸಿಗ ಗಿರೀಶ್ ಬೇಸರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿರಸಿ: ಕೋವಿಡ್ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದ ವ್ಯಾಪಾರಿ ವರ್ಗಕ್ಕೆ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಚೇತರಿಕೆಯ ವಿಶ್ವಾಸ ಮೂಡಿಸಿದೆ.</p>.<p>ಸೂರ್ಯ ಮುಳುಗುತ್ತಿದ್ದಂತೆ ಜಾತ್ರೆಪೇಟೆಯ ದೃಶ್ಯ ಬದಲಾಗುತ್ತಿದೆ. ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುವ ಪೇಟೆ ಹೊಸ ಲೋಕವನ್ನು ಜನರಿಗೆ ಪರಿಚಯಿಸುತ್ತಿದೆ.</p>.<p>ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗಳಲ್ಲಿ ಒಂದೆನಿಸಿರುವ ಈ ಜಾತ್ರೆಯಲ್ಲಿ ದೇಶದ ನಾನಾ ಭಾಗಗಳಿಂದ ನೂರಾರು ವ್ಯಾಪಾರಿಗಳು ಬಂದಿದ್ದಾರೆ. ತಿಂಡಿತಿನಿಸುಗಳು, ಆಟಿಕೆಗಳು, ಮಿಠಾಯಿ, ಅಲಂಕಾರಿಕ ಸಾಮಗ್ರಿ, ಬಟ್ಟೆ ಹೀಗೆ ಹಲವು ಬಗೆಯ ಪರಿಕರಗಳ ಮಾರಾಟ ಚುರುಕಾಗಿದೆ.</p>.<p>ಕೋಣನಬಿಡಕಿ, ಕೋಟೆಕೆರೆಯಲ್ಲಿ ಸಂಜೆಯಾಗುತ್ತಿದ್ದಂತೆ ಝಗಮಗಿಸುವ ಬೆಳಕಿನೊಂದಿಗೆ ಅಮ್ಯೂಸಮೆಂಟ್ ಲೋಕ ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ. ಜಲಸಾಹಸ ಕ್ರೀಡೆಗೂ ಜನ ಮುಗಿಬೀಳುತ್ತಿದ್ದಾರೆ. ಜಾತ್ರೆಯ ಪೇಟೆ ಕಳೆದ ಎರಡು ದಿನಗಳಿಂದ ಜನದಟ್ಟಣೆಯಿಂದ ಕೂಡಿದ್ದು ಜೀವಕಳೆ ತುಂಬಿದೆ.</p>.<p>‘ಎರಡು ವರ್ಷಗಳಿಂದ ಹಲವು ಜಾತ್ರೆ, ಉತ್ಸವಗಳು ನಿಷೇಧವಾಗಿದ್ದವು. ವ್ಯಾಪಾರಿ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದವರ ಪಾಲಿಗೆ ಕರಾಳ ದಿನಗಳೇ ಅನಿವಾರ್ಯವಾಗಿತ್ತು. ಶಿರಸಿ ಜಾತ್ರೆ ಈ ನೋವನ್ನು ಮರೆಸಿದೆ. ಉತ್ತಮ ವಹಿವಾಟು ನಡೆಸುತ್ತಿದ್ದೇವೆ’ ಎಂದು ಬೊಂಬೆಗಳನ್ನು ಮಾರಾಟಕ್ಕೆ ಇಟ್ಟುಕೊಂಡಿರುವ ಕಾನ್ಪುರದ ರಫೀಕ್ ಪ್ರತಿಕ್ರಿಯಿಸಿದರು.</p>.<p>‘ವರ್ಷದಿಂದ ದುಡಿದಿದ್ದಷ್ಟು ಆದಾಯವನ್ನು ಜಾತ್ರೆಯ ಆರೇ ದಿನದಲ್ಲಿ ಸಂಪಾದಿಸಿದ್ದೇವೆ. ಈ ಹಿಂದಿನ ಎರಡು ಜಾತ್ರೆಗಳಲ್ಲೂ ವಹಿವಾಟು ನಡೆಸಿದ ಅನುಭವಕ್ಕಿಂತ ಈ ಬಾರಿ ಉತ್ತಮ ವಾತಾವರಣ ನಿರ್ಮಾಣಗೊಂಡಿದೆ. ಜನರು ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ’ ಎಂದು ಬಿಕಾನೇರ್ ಜಿಲ್ಲೆಯಿಂದ ಬಂದಿರುವ ವ್ಯಾಪಾರಿ ಜೋಶ್ನಾ ಹೇಳಿದರು.</p>.<p>‘ಜಾತ್ರೆಪೇಟೆಯಲ್ಲಿ ಖಾದ್ಯ, ದಿನಬಳಕೆ ಸಲಕರಣೆ, ಅಲಂಕಾರಿಕ ಸಾಮಗ್ರಿ ಸೇರಿದಂತೆ ಬಹುತೇಕ ವಸ್ತುಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡಲಾಗುತ್ತಿದೆ’ ಎಂದು ಪ್ರವಾಸಿಗ ಗಿರೀಶ್ ಬೇಸರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>