<p><strong>ಕಾರವಾರ:</strong> ತುಳಸಿ ಹಬ್ಬದ ನಿಮಿತ್ತ ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ಕಬ್ಬಿನ ಹೊರೆಗೆ ಭಾರಿ ಬೇಡಿಕೆ ಇತ್ತಾದರೂ, ಅಗತ್ಯದಷ್ಟು ಪೂರೈಕೆ ಇರದ ಪರಿಣಾಮ ಬೆಲೆ ವಿಪರೀತ ಏರಿಕೆ ಕಂಡಿತು. ಮಧ್ಯಾಹ್ನದ ವೇಳೆಗೆ ಒಂದು ಕಬ್ಬಿಗೆ ₹ 250 ನೀಡಿ ಗ್ರಾಹಕರು ಕೊಂಡುಕೊಳ್ಳುವ ಸ್ಥಿತಿ ಎದುರಾಯಿತು.</p>.<p>ಹಬ್ಬದ ಮುನ್ನಾ ದಿನ ಮಾರುಕಟ್ಟೆಯಲ್ಲಿ 10 ರಿಂದ 12 ಕಬ್ಬುಗಳಿರುವ ಹೊರೆಯೊಂದಕ್ಕೆ ₹ 400–₹ 450 ದರವಿತ್ತು. ಹಬ್ಬದ ದಿನ ಏಕಾಏಕಿ ಬೇಡಿಕೆ ಹೆಚ್ಚಿತು. ಆದರೆ ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣದಷ್ಟು ಕಬ್ಬು ದಾಸ್ತಾನು ಇರಲಿಲ್ಲ. ಆದರೆ ಆಚರಣೆಗೆ ಅಗತ್ಯವಿರುವ ಕಾರಣ ಗ್ರಾಹಕರು ಕಬ್ಬು ಖರೀದಿಗೆ ಮುಗಿಬಿದ್ದಿದ್ದರು.</p>.<p>‘ವ್ಯಾಪಾರಿಗಳು ಕಬ್ಬಿನ ಹೊರೆಯ ಕೊರತೆ ಸೃಷ್ಟಿಸಿ ದರ ಹೆಚ್ಚಿಸಿದ್ದಾರೆ. ಹೊರೆಯೊಂದಕ್ಕೆ ₹ 1 ಸಾವಿರದಿಂದ ₹ 3 ಸಾವಿರಕ್ಕೆ ಬೇಡಿಕೆ ಇಟ್ಟವರೂ ಇದ್ದಾರೆ. ಇದರಿಂದ ಸಾಮಾನ್ಯ ಜನರು ಕಬ್ಬು ಖರೀದಿಸಲಾಗದೇ ಬರಿಗೈಲಿ ಮರಳುವ ಸ್ಥಿತಿಯೂ ಉಂಟಾಯಿತು’ ಎಂದು ಆಶ್ರಮ ರಸ್ತೆಯ ನಿವಾಸಿ ಪ್ರಸಾದ ಕಾಮತ್ ಹೇಳಿದರು.</p>.<p>ಗ್ರಾಹಕರ ಪರದಾಟ ಗಮನಿಸಿದ ಕೆಲ ಸ್ಥಳೀಯ ವ್ಯಾಪಾರಿಗಳು ಸಂಜೆಯ ವೇಳೆಗೆ ಎರಡು ಲೋಡ್ಗಳಷ್ಟು ಕಬ್ಬು ತರಿಸಿ ಹೊರೆಯೊಂದಕ್ಕೆ ₹ 250ಕ್ಕೆ ಮಾರಾಟ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ತುಳಸಿ ಹಬ್ಬದ ನಿಮಿತ್ತ ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ಕಬ್ಬಿನ ಹೊರೆಗೆ ಭಾರಿ ಬೇಡಿಕೆ ಇತ್ತಾದರೂ, ಅಗತ್ಯದಷ್ಟು ಪೂರೈಕೆ ಇರದ ಪರಿಣಾಮ ಬೆಲೆ ವಿಪರೀತ ಏರಿಕೆ ಕಂಡಿತು. ಮಧ್ಯಾಹ್ನದ ವೇಳೆಗೆ ಒಂದು ಕಬ್ಬಿಗೆ ₹ 250 ನೀಡಿ ಗ್ರಾಹಕರು ಕೊಂಡುಕೊಳ್ಳುವ ಸ್ಥಿತಿ ಎದುರಾಯಿತು.</p>.<p>ಹಬ್ಬದ ಮುನ್ನಾ ದಿನ ಮಾರುಕಟ್ಟೆಯಲ್ಲಿ 10 ರಿಂದ 12 ಕಬ್ಬುಗಳಿರುವ ಹೊರೆಯೊಂದಕ್ಕೆ ₹ 400–₹ 450 ದರವಿತ್ತು. ಹಬ್ಬದ ದಿನ ಏಕಾಏಕಿ ಬೇಡಿಕೆ ಹೆಚ್ಚಿತು. ಆದರೆ ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣದಷ್ಟು ಕಬ್ಬು ದಾಸ್ತಾನು ಇರಲಿಲ್ಲ. ಆದರೆ ಆಚರಣೆಗೆ ಅಗತ್ಯವಿರುವ ಕಾರಣ ಗ್ರಾಹಕರು ಕಬ್ಬು ಖರೀದಿಗೆ ಮುಗಿಬಿದ್ದಿದ್ದರು.</p>.<p>‘ವ್ಯಾಪಾರಿಗಳು ಕಬ್ಬಿನ ಹೊರೆಯ ಕೊರತೆ ಸೃಷ್ಟಿಸಿ ದರ ಹೆಚ್ಚಿಸಿದ್ದಾರೆ. ಹೊರೆಯೊಂದಕ್ಕೆ ₹ 1 ಸಾವಿರದಿಂದ ₹ 3 ಸಾವಿರಕ್ಕೆ ಬೇಡಿಕೆ ಇಟ್ಟವರೂ ಇದ್ದಾರೆ. ಇದರಿಂದ ಸಾಮಾನ್ಯ ಜನರು ಕಬ್ಬು ಖರೀದಿಸಲಾಗದೇ ಬರಿಗೈಲಿ ಮರಳುವ ಸ್ಥಿತಿಯೂ ಉಂಟಾಯಿತು’ ಎಂದು ಆಶ್ರಮ ರಸ್ತೆಯ ನಿವಾಸಿ ಪ್ರಸಾದ ಕಾಮತ್ ಹೇಳಿದರು.</p>.<p>ಗ್ರಾಹಕರ ಪರದಾಟ ಗಮನಿಸಿದ ಕೆಲ ಸ್ಥಳೀಯ ವ್ಯಾಪಾರಿಗಳು ಸಂಜೆಯ ವೇಳೆಗೆ ಎರಡು ಲೋಡ್ಗಳಷ್ಟು ಕಬ್ಬು ತರಿಸಿ ಹೊರೆಯೊಂದಕ್ಕೆ ₹ 250ಕ್ಕೆ ಮಾರಾಟ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>