<p><strong>ಅಂಕೋಲಾ</strong>: ‘ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಅಮೂಲ್ಯ ಸಂಪತ್ತು. ಅಂತಹ ಸಂಪತ್ತಿನ ಗಳಿಕೆಯೇ ವಿದ್ಯಾರ್ಥಿ ಜೀವನದ ಧ್ಯೇಯವಾಗಿರಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿ ಸದಸ್ಯ ಶಿವಾನಂದ ನಾಯಕ ಹೇಳಿದರು.</p>.<p>ಪಟ್ಟಣದ ಪಿ.ಎಂ.ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಯೂನಿಯನ್ ಜಿಮಖಾನಾ ಹಾಗೂ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕುಮಟಾದ ನಿವೃತ್ತ ಯೋಧ ಮಂಜುನಾಥ ಪಟಗಾರ, ‘ವಿದ್ಯಾರ್ಥಿ ಜೀವನದಲ್ಲಿಯೇ ಭವಿಷ್ಯದ ಬದುಕಿನ ಗುರಿ ಇಲ್ಲದಿದ್ದರೆ ಕಲಿಕೆ ವ್ಯರ್ಥ. ಯೋಧನಾಗಿ ದೇಶ ಸೇವೆಗೆ ಆಯ್ಕೆಯಾದ ಸಂದರ್ಭ ಮತ್ತು ಅದರಿಂದಲೇ ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳ ಭಾಷೆ, ಸಂಸ್ಕೃತಿಯ ಅರಿವಿನ ಅನುಭವ ಪಡೆಯಲು ಸಾಧ್ಯವಾಯಿತು’ ಎಂದರು.</p>.<p>ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಕೆ.ನಾಯ್ಕ ಮಾತನಾಡಿದರು. ಪ್ರಾಚಾರ್ಯ ಫಾಲ್ಗುಣ ಗೌಡ, ಉಪನ್ಯಾಸಕರಾದ ರಮಾನಂದ ನಾಯಕ, ಉಲ್ಲಾಸ ಹುದ್ದಾರ, ಶ್ರೀನಿವಾಸ ಯು.ಕೆ, ರಮೇಶ್ ಗೌಡ ಎಂ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಭಾಗೀರಥಿ ಹೆಗಡೆಕಟ್ಟೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂಕೋಲಾ</strong>: ‘ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಅಮೂಲ್ಯ ಸಂಪತ್ತು. ಅಂತಹ ಸಂಪತ್ತಿನ ಗಳಿಕೆಯೇ ವಿದ್ಯಾರ್ಥಿ ಜೀವನದ ಧ್ಯೇಯವಾಗಿರಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿ ಸದಸ್ಯ ಶಿವಾನಂದ ನಾಯಕ ಹೇಳಿದರು.</p>.<p>ಪಟ್ಟಣದ ಪಿ.ಎಂ.ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಯೂನಿಯನ್ ಜಿಮಖಾನಾ ಹಾಗೂ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಕುಮಟಾದ ನಿವೃತ್ತ ಯೋಧ ಮಂಜುನಾಥ ಪಟಗಾರ, ‘ವಿದ್ಯಾರ್ಥಿ ಜೀವನದಲ್ಲಿಯೇ ಭವಿಷ್ಯದ ಬದುಕಿನ ಗುರಿ ಇಲ್ಲದಿದ್ದರೆ ಕಲಿಕೆ ವ್ಯರ್ಥ. ಯೋಧನಾಗಿ ದೇಶ ಸೇವೆಗೆ ಆಯ್ಕೆಯಾದ ಸಂದರ್ಭ ಮತ್ತು ಅದರಿಂದಲೇ ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳ ಭಾಷೆ, ಸಂಸ್ಕೃತಿಯ ಅರಿವಿನ ಅನುಭವ ಪಡೆಯಲು ಸಾಧ್ಯವಾಯಿತು’ ಎಂದರು.</p>.<p>ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಕೆ.ನಾಯ್ಕ ಮಾತನಾಡಿದರು. ಪ್ರಾಚಾರ್ಯ ಫಾಲ್ಗುಣ ಗೌಡ, ಉಪನ್ಯಾಸಕರಾದ ರಮಾನಂದ ನಾಯಕ, ಉಲ್ಲಾಸ ಹುದ್ದಾರ, ಶ್ರೀನಿವಾಸ ಯು.ಕೆ, ರಮೇಶ್ ಗೌಡ ಎಂ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಭಾಗೀರಥಿ ಹೆಗಡೆಕಟ್ಟೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>