ನೂರಾರು ಪ್ರವಾಸಿಗರಿಂದಾಗಿ ಈ ಜಲಪಾತ ಕೆಲವು ವರ್ಷಗಳ ಹಿಂದಷ್ಟೇ ಪ್ರವಾಸಿ ತಾಣವಾಗಿ ರೂಪುಗೊಂಡಿರುತ್ತು. ಆದರೆ, ಇಲ್ಲಿಗೆ ಭೇಟಿ ನೀಡುವವರು ತಾವು ಕೊಂಡೊಯ್ದ ಉಪಹಾರದ ಪೊಟ್ಟಣ, ತಂಪು ಪಾನೀಯಗಳ ಬಾಟಲ್ಗಳು, ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಜಲಪಾತದ ಬಳಿ ಎಸೆದು ಬರುತ್ತಿದ್ದರು. ಹೀಗಾಗಿ ಜಲಪಾತದ ಬಳಿ ತ್ಯಾಜಗಳ ರಾಶಿಯೇ ತುಂಬಿತ್ತು. ಅನೇಕ ಪರಿಸರ ಪ್ರೇಮಿಗಳು ಈ ಬಗ್ಗೆ ದೂರಿದ್ದರು. ‘ಪ್ರಜಾವಾಣಿ’ಯೂ ಈ ಹಿಂದೆ ವರದಿ ಮಾಡಿತ್ತು.