ಚಂದಾವರ ನಾಕಾದ ಗಂಗೆ ಮಾರು ಮುಕ್ರಿ ಅವರ ಮನೆಯ ಬಾವಿಗೆ ರಿಂಗ್ ಇಳಿಸುವ ಕೆಲಸ ಮುಗಿಸಿ ಸಂಜೆ ಅವರ ಮನೆಯಲ್ಲಿ ಕುಳಿತಿದ್ದಾಗ ಪ್ರತಾಪನ್ ಅವರಿಗೆ ಎದೆ ನೋವು ಕಾಣಿಸಿತು. ಅವರನ್ನು ಕುಮಟಾದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಾಲಾಯಿತು. ಆದರೆ ಮಾರ್ಗಮಧ್ಯೆಯೆ ಅವರು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.