<p><strong>ಮುಂಡಗೋಡ: </strong>ಸರ್ಕಾರದ ಸಹಾಯಧನದಲ್ಲಿ ತಾಲ್ಲೂಕಿನ ರೈತರಿಗೆ ವಿತರಿಸಬೇಕಾಗಿದ್ದ ಬಿತ್ತನೆ ಬೀಜಗಳನ್ನು ಬೇರೆ ತಾಲ್ಲೂಕಿನ ರೈತರಿಗೆ ಮಾರಾಟ ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಿರಸಿಯ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಇಲ್ಲಿನ ಕೃಷಿ ಇಲಾಖೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಜರುಗಿದೆ.<br /> <br /> ತಾಲ್ಲೂಕಿನ ರೈತನ ಹೆಸರಿನಲ್ಲಿ ಬಿಲ್ ಮಾಡಿ ಬೇರೆ ತಾಲ್ಲೂಕಿನ ರೈತರೊಬ್ಬರಿಗೆ 75 ಕೆ.ಜಿ. ಅಭಿಲಾಷ ಭತ್ತದ ಬೀಜಗಳನ್ನು ವಿತರಿಸಿದ್ದ ಕೃಷಿ ಇಲಾಖೆಯ ಸಿಬ್ಬಂದಿ ಮಲ್ಲಿಕಾರ್ಜುನ ದೇವಿಕೊಪ್ಪ ಅವರನ್ನು ಉಪವಿಭಾಗಾಧಿಕಾರಿ ತರಾಟೆಗೆ ತೆಗೆದುಕೊಂಡರು.`ಇಲ್ಲಿನ ರೈತರ ಹೆಸರಿನಲ್ಲಿ ಬಿಲ್ ಮಾಡಿ ಬೀಜಗಳನ್ನು ಮಾರಿದರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ' ಎಂದರು.<br /> <br /> ಕೃಷಿ ಇಲಾಖೆಯ ಸಿಬ್ಬಂದಿ ಮಲ್ಲಿಕಾರ್ಜುನ ದೇವಿಕೊಪ್ಪ ಮಾತನಾಡಿ, `ನಮ್ಮ ಇಲಾಖೆಯ ಸಿಬ್ಬಂದಿಯೊಬ್ಬರ ಸಂಬಂಧಿಕ ರೈತರೊಬ್ಬರು ಬಂದು ಬಿತ್ತನೆ ಬೀಜಗಳನ್ನು ಕೇಳಿದ್ದರಿಂದ ಮುಂಡಗೋಡ ತಾಲ್ಲೂಕಿನ ರೈತನ ಹೆಸರಿನಲ್ಲಿ ಬಿಲ್ ಮಾಡಿ ಮಾರಾಟ ಮಾಡಲಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಇದೊಂದು ಸಲ ಕ್ಷಮಿಸಬೇಕು' ಎಂದರು.<br /> <br /> ನಂತರ ಕೃಷಿ ಇಲಾಖೆಯಲ್ಲಿ ಸಂಗ್ರಹವಿರುವ ಬಿತ್ತನೆ ಬೀಜಗಳನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜಗಳನ್ನು ವಿತರಿಸಿ ಎಂದು ಸಿಬ್ಬಂದಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ: </strong>ಸರ್ಕಾರದ ಸಹಾಯಧನದಲ್ಲಿ ತಾಲ್ಲೂಕಿನ ರೈತರಿಗೆ ವಿತರಿಸಬೇಕಾಗಿದ್ದ ಬಿತ್ತನೆ ಬೀಜಗಳನ್ನು ಬೇರೆ ತಾಲ್ಲೂಕಿನ ರೈತರಿಗೆ ಮಾರಾಟ ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಿರಸಿಯ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಇಲ್ಲಿನ ಕೃಷಿ ಇಲಾಖೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಜರುಗಿದೆ.<br /> <br /> ತಾಲ್ಲೂಕಿನ ರೈತನ ಹೆಸರಿನಲ್ಲಿ ಬಿಲ್ ಮಾಡಿ ಬೇರೆ ತಾಲ್ಲೂಕಿನ ರೈತರೊಬ್ಬರಿಗೆ 75 ಕೆ.ಜಿ. ಅಭಿಲಾಷ ಭತ್ತದ ಬೀಜಗಳನ್ನು ವಿತರಿಸಿದ್ದ ಕೃಷಿ ಇಲಾಖೆಯ ಸಿಬ್ಬಂದಿ ಮಲ್ಲಿಕಾರ್ಜುನ ದೇವಿಕೊಪ್ಪ ಅವರನ್ನು ಉಪವಿಭಾಗಾಧಿಕಾರಿ ತರಾಟೆಗೆ ತೆಗೆದುಕೊಂಡರು.`ಇಲ್ಲಿನ ರೈತರ ಹೆಸರಿನಲ್ಲಿ ಬಿಲ್ ಮಾಡಿ ಬೀಜಗಳನ್ನು ಮಾರಿದರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ' ಎಂದರು.<br /> <br /> ಕೃಷಿ ಇಲಾಖೆಯ ಸಿಬ್ಬಂದಿ ಮಲ್ಲಿಕಾರ್ಜುನ ದೇವಿಕೊಪ್ಪ ಮಾತನಾಡಿ, `ನಮ್ಮ ಇಲಾಖೆಯ ಸಿಬ್ಬಂದಿಯೊಬ್ಬರ ಸಂಬಂಧಿಕ ರೈತರೊಬ್ಬರು ಬಂದು ಬಿತ್ತನೆ ಬೀಜಗಳನ್ನು ಕೇಳಿದ್ದರಿಂದ ಮುಂಡಗೋಡ ತಾಲ್ಲೂಕಿನ ರೈತನ ಹೆಸರಿನಲ್ಲಿ ಬಿಲ್ ಮಾಡಿ ಮಾರಾಟ ಮಾಡಲಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಇದೊಂದು ಸಲ ಕ್ಷಮಿಸಬೇಕು' ಎಂದರು.<br /> <br /> ನಂತರ ಕೃಷಿ ಇಲಾಖೆಯಲ್ಲಿ ಸಂಗ್ರಹವಿರುವ ಬಿತ್ತನೆ ಬೀಜಗಳನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜಗಳನ್ನು ವಿತರಿಸಿ ಎಂದು ಸಿಬ್ಬಂದಿಗೆ ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>