<p><strong>ಮುಂಡಗೋಡ: </strong>ಮತದಾನ ಮುಗಿಯುತ್ತಿದ್ದಂತೆ ಕಾರ್ಯಕರ್ತರು ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯಾವ ಮತಗಟ್ಟೆಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತಗಳು ಬಿದ್ದಿರಬಹುದು, ವೋಟಿಂಗ್ ಪ್ರಮಾಣ ಹೆಚ್ಚಳವಾಗಿರುವಲ್ಲಿ ತಮಗೆಷ್ಟು ಲಾಭ ಅಥವಾ ನಷ್ಟವಾಗಲಿದೆ ಎಂಬ ಅಂದಾಜು ಮಾಡುತ್ತಿದ್ದಾರೆ ಅಭ್ಯರ್ಥಿಗಳು.</p>.<p>ಹಗಲಿರುಳು ದುಡಿದು ಸುಸ್ತಾಗಿರುವ ಸ್ಥಳೀಯ ಮುಖಂಡರು ಭಾನುವಾರ ವಿಶ್ರಾಂತಿ ಪಡೆದರು. ಕೆಲವರು ಎಲ್ಲೆಲ್ಲಿ ತಮ್ಮ ಪಕ್ಷಕ್ಕೆ ಅನುಕೂಲವಾಗಿದೆ. ಎಲ್ಲಿ ವಿರೋಧಿಗಳು ಮೇಲುಗೈ ಸಾಧಿಸಬಹುದು ಎಂಬ ಬಗ್ಗೆ ಕಾರ್ಯಕರ್ರೊಂದಿಗೆ ಚರ್ಚಿಸಿದರು.</p>.<p>ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ81.85 ಮತದಾನವಾಗಿದೆ. ತಾಲ್ಲೂಕಿನ ಕೆಲವು ಮತಗಟ್ಟೆಗಳಲ್ಲಿ ಶೇ75ರಿಂದ ಶೇ90ರ ವರೆಗೆ ಮತದಾನವಾಗಿದೆ. ಇದು ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.</p>.<p>ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಗೆಲುವು ತಮ್ಮದೇ ಎಂದು ಹೇಳುತ್ತಿದ್ದಾರೆ. ಚಲಾವಣೆಯಾದ ಮತ ಪ್ರಮಾಣದ ಮೇಲೆ ಗೆಲುವಿನ ವಿಶ್ಲೇಷಣೆ ಮಾಡುತ್ತಿದ್ದಾರೆ.</p>.<p>ಜಾತಿಯ ಮತಗಳು ಹೇಗೆ ಹಂಚಿಕೆ ಆಗಿರಬಹುದು ಎಂಬುದನ್ನೂ ವಿಶ್ಲೇಷಿಸುತ್ತಿದ್ದಾರೆ. ಯಾರಿಂದ ಪಕ್ಷಕ್ಕೆ ಹಿನ್ನಡೆಯಾಯಿತು, ಯಾರು ಕೈಕೊಟ್ಟರು, ಒಳಗೊಳಗೆ ಯಾರು ವಿರೋಧಿಗಳಿಗೆ ಬೆಂಬಲ ನೀಡಿದರು ಎಂಬ ಚರ್ಚೆ ಬಿರುಸಾಗಿ ನಡೆದಿದೆ.</p>.<p>ಆದರೆ, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿರುವ ಮತದಾರರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಕೆಲವರು ಈ ಸಲ ಏನೂ ಹೇಳಲು ಆಗದು. ಸಮಬಲದ ಹೋರಾಟ ಕಂಡುಬಂದಿದೆ. ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ ಎನ್ನುತ್ತ ಜಾಣತನದಿಂದ ಉತ್ತರ ನೀಡುತ್ತಿದ್ದಾರೆ. ಪಕ್ಷಗಳ ಪರವಾಗಿ ದುಡಿದಿರುವ ಕಾರ್ಯಕರ್ತರು ನಮ್ಮ ಗೆಲುವು ಎಂದು ಸವಾಲು ಹಾಕುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ: </strong>ಮತದಾನ ಮುಗಿಯುತ್ತಿದ್ದಂತೆ ಕಾರ್ಯಕರ್ತರು ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಯಾವ ಮತಗಟ್ಟೆಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತಗಳು ಬಿದ್ದಿರಬಹುದು, ವೋಟಿಂಗ್ ಪ್ರಮಾಣ ಹೆಚ್ಚಳವಾಗಿರುವಲ್ಲಿ ತಮಗೆಷ್ಟು ಲಾಭ ಅಥವಾ ನಷ್ಟವಾಗಲಿದೆ ಎಂಬ ಅಂದಾಜು ಮಾಡುತ್ತಿದ್ದಾರೆ ಅಭ್ಯರ್ಥಿಗಳು.</p>.<p>ಹಗಲಿರುಳು ದುಡಿದು ಸುಸ್ತಾಗಿರುವ ಸ್ಥಳೀಯ ಮುಖಂಡರು ಭಾನುವಾರ ವಿಶ್ರಾಂತಿ ಪಡೆದರು. ಕೆಲವರು ಎಲ್ಲೆಲ್ಲಿ ತಮ್ಮ ಪಕ್ಷಕ್ಕೆ ಅನುಕೂಲವಾಗಿದೆ. ಎಲ್ಲಿ ವಿರೋಧಿಗಳು ಮೇಲುಗೈ ಸಾಧಿಸಬಹುದು ಎಂಬ ಬಗ್ಗೆ ಕಾರ್ಯಕರ್ರೊಂದಿಗೆ ಚರ್ಚಿಸಿದರು.</p>.<p>ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ81.85 ಮತದಾನವಾಗಿದೆ. ತಾಲ್ಲೂಕಿನ ಕೆಲವು ಮತಗಟ್ಟೆಗಳಲ್ಲಿ ಶೇ75ರಿಂದ ಶೇ90ರ ವರೆಗೆ ಮತದಾನವಾಗಿದೆ. ಇದು ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.</p>.<p>ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಗೆಲುವು ತಮ್ಮದೇ ಎಂದು ಹೇಳುತ್ತಿದ್ದಾರೆ. ಚಲಾವಣೆಯಾದ ಮತ ಪ್ರಮಾಣದ ಮೇಲೆ ಗೆಲುವಿನ ವಿಶ್ಲೇಷಣೆ ಮಾಡುತ್ತಿದ್ದಾರೆ.</p>.<p>ಜಾತಿಯ ಮತಗಳು ಹೇಗೆ ಹಂಚಿಕೆ ಆಗಿರಬಹುದು ಎಂಬುದನ್ನೂ ವಿಶ್ಲೇಷಿಸುತ್ತಿದ್ದಾರೆ. ಯಾರಿಂದ ಪಕ್ಷಕ್ಕೆ ಹಿನ್ನಡೆಯಾಯಿತು, ಯಾರು ಕೈಕೊಟ್ಟರು, ಒಳಗೊಳಗೆ ಯಾರು ವಿರೋಧಿಗಳಿಗೆ ಬೆಂಬಲ ನೀಡಿದರು ಎಂಬ ಚರ್ಚೆ ಬಿರುಸಾಗಿ ನಡೆದಿದೆ.</p>.<p>ಆದರೆ, ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿರುವ ಮತದಾರರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಕೆಲವರು ಈ ಸಲ ಏನೂ ಹೇಳಲು ಆಗದು. ಸಮಬಲದ ಹೋರಾಟ ಕಂಡುಬಂದಿದೆ. ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟ ಎನ್ನುತ್ತ ಜಾಣತನದಿಂದ ಉತ್ತರ ನೀಡುತ್ತಿದ್ದಾರೆ. ಪಕ್ಷಗಳ ಪರವಾಗಿ ದುಡಿದಿರುವ ಕಾರ್ಯಕರ್ತರು ನಮ್ಮ ಗೆಲುವು ಎಂದು ಸವಾಲು ಹಾಕುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>