ಡಿ. 22ರಂದು ನಗರದಲ್ಲಿ ಕೊಪ್ಪಳದ ಬಂಡಿ ಹರ್ಲಾಪುರದ ಲಂಬಾಣಿ ವೆಂಕಟೇಶ (35), ಅಬ್ದುಲ್ ವಹಾಬ್ (23) ಎಂಬುವರನ್ನು ಪೊಲೀಸರು ಬಂಧಿಸಿ, ಅವರಿಂದ ₹1.5 ಕೋಟಿ ಬೆಲೆಬಾಳುವ ಒಂದುವರೆ ಕೆ.ಜಿ. ತಿಮಿಂಗಿಲ ವಾಂತಿ ವಶಪಡಿಸಿಕೊಂಡಿದ್ದರು. ಅವರು ನೀಡಿದ ಮಾಹಿತಿ ಮೇರೆಗೆ ಅದೇ ದಿನ ಪೊಲೀಸರು ಮುರುಡೇಶ್ವರದ ಹಿರಮನೆ ಗಣಪತಿ (42), ಹುಬ್ಬಳ್ಳಿ ಬೆಂಗೇರಿಯ ಪುಂಡಲೀಕ್ ಲಕ್ಷ್ಮಣ (34), ಮಹೇಶ ಡೊಂಗ್ರಿ (33), ವಿಜಯಪುರದ ಶ್ರೀಧರ ಹೇಮಂತ್ ಎಂಬುವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದರು.