ಬಿಸಿಲಿನ ಬೇಗೆಗೆ ಜನ, ಜಾನುವಾರು, ಪ್ರಾಣಿ, ಪಕ್ಷಿಗಳು ತತ್ತರಿಸಿವೆ. ಬೆಳಿಗ್ಗೆ 8ಕ್ಕೆ ಮೈಸುಡುವ ಬಿಸಿಲು ಮಧ್ಯಾಹ್ನಕ್ಕೆ ಗರಿಷ್ಠ ಮಟ್ಟ ತಲುಪುವುದರಿಂದ ಜನಸಂಚಾರ ವಿರಳವಾಗಿದೆ. ವಿಜಯಪುರ ನಗರದ ಪ್ರಮುಖ ವೃತ್ತಗಳಲ್ಲಿ(ಟ್ರಾಫಿಕ್) ಮಹಾನಗರ ಪಾಲಿಕೆಯು ಹಸಿರು ಹೊದಿಕೆಯ ಚಪ್ಪರ ಮಾಡಿ, ವಾಹನ, ಸಂಚಾರಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.