ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ಕೊಟ್ಟೂರಿನ ಗುರು ಬಸವೇಶ್ವರ ಸ್ವಾಮಿ, ಮೈಲಾರದ ಮೈಲಾರಲಿಂಗೇಶ್ವರ ಸೇರಿದಂತೆ 700 ದೇವಸ್ಥಾನಗಳಲ್ಲಿ ಸೋಮವಾರ ಬೆಳಿಗ್ಗೆ 6.30ಕ್ಕೆ ವಿಶೇಷ ಪೂಜೆ ನೆರವೇರಿತು. ಕೆಲವರು ಪೂಜೆಗೆ ಸಾಕ್ಷಿಯಾದರು. ಸಮಯ ಕಳೆದಂತೆ ವಿವಿಧ ಕಡೆಗಳಿಂದ ಭಕ್ತರು ದೇಗುಲಕ್ಕೆ ಬಂದು ಪೂಜೆ ನೆರವೇರಿಸಿ, ದರ್ಶನ ಪಡೆದರು. ಇಷ್ಟು ದಿನಗಳ ವರೆಗೆ ಮೌನ ಆವರಿಸಿದ್ದ ದೇವಸ್ಥಾನಗಳಲ್ಲಿ ಗಂಟೆ ಶಬ್ದ ಕೇಳಿಸಿತು. ಭಕ್ತರ ಬರುವಿಕೆಯಿಂದ ದೇವಸ್ಥಾನಗಳಿಗೆ ವಿಶೇಷ ಕಳೆ ಬಂದಿದೆ. ಆದರೆ, ತೈಲಾಭಿಷೇಕ, ಪಂಚಾಮೃತ ಅಭಿಷೇಕ, ಅನ್ನದಾಸೋಹಕ್ಕೆ ವ್ಯವಸ್ಥೆ ಕಲ್ಪಿಸಿಲ್ಲ.