<p><strong>ಸಿರುಗುಪ್ಪ:</strong> ‘ಪ್ರಕೃತಿ ವಿಕೋಪದಿಂದ ಹಾಗೂ ಅಪಘಾತಕ್ಕೀಡಾಗಿ ಸತ್ತರೆ ಪಶು ಸಂಗೋಪನೆ ಇಲಾಖೆಯ ತಂತ್ರಾಂಶ ಸಹಾಯದಿಂದ ರೈತರು ಪರಿಹಾರ ಪಡೆದುಕೊಳ್ಳಬೇಕು’ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗಂಗಾಧರ ತಿಳಿಸಿದರು.</p>.<p>ನಗರದ ಪಶುಸಂಗೋಪನಾ ಆಸ್ಪತ್ರೆಯ ಆವರಣದಲ್ಲಿ ನಡೆದ ಇಲಾಖೆಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.</p>.<p>‘ವನ್ಯ ಜೀವಿಗಳ ದಾಳಿಯಿಂದ ದನಕರುಗಳು ಸತ್ತರೆ ₹35 ಸಾವಿರ, ಅರಣ್ಯ ಇಲಾಖೆಯಿಂದ ಹಾಗೂ ವಿದ್ಯುತ್ ಅಪಘಾತದಿಂದ ಸಾವಿಗೀಡಾದರೆ ₹50 ಸಾವಿರ ಪರಿಹಾರಧನ ಜೆಸ್ಕಾಂ ಇಲಾಖೆಯಿಂದ ದೊರೆಯುತ್ತದೆ. ಅಪಘಾತದಲ್ಲಿ ದನಕರುಗಳು ಸತ್ತರೆ ಪರಿಹಾರಧನ ₹15 ಸಾವಿರ ದೊರೆಯುತ್ತದೆ, ಒಂದು ಕುರಿಸತ್ತರೆ ₹7,500ದವರೆಗೆ, ಕುರಿಮರಿ ಸತ್ತರೆ ₹5 ಸಾವಿರ ಪರಿಹಾರಧನ ದೊರೆಯುತ್ತದೆ. ಈ ಬಗ್ಗೆ ನಮ್ಮ ಇಲಾಖೆಯ ಸಿಬ್ಬಂದಿಯು ರೈತರಿಗೆ ಮತ್ತು ಕುರಿಗಾರರಿಗೆ ಮಾಹಿತಿಯನ್ನು ನೀಡಲಾಗಿದೆ’ ಎಂದರು.</p>.<p>ತಾಲ್ಲೂಕಿನಲ್ಲಿ ನಾಯಿಗಳ ಕಡಿತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಿಸಲು ಸಮಾಜ ಸೇವಾ ಸಂಸ್ಥೆಗಳು, ಸ್ಥಳೀಯ ಸರ್ಕಾರಿ ಸಂಸ್ಥೆಗಳ ಸಹಕಾರದೊಂದಿಗೆ ಮಾಡಲು ಅವಕಾಶವಿರುತ್ತದೆ. ನಾಯಿಗಳ ಕಡಿತ ತಪ್ಪಿಸಲು ಸಂತಾನ ಹರಣ ಚಿಕಿತ್ಸೆ ಮಹತ್ವವನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಬೇಕು.</p>.<p>ಪಶುಸಂಗೋಪನೆ ಇಲಾಖೆಯ ಮೇಲ್ವಿಚಾರಕ ಟಿ.ಹುಚ್ಚೀರಪ್ಪ, ಪಶುವೈದ್ಯ ಕುಬೇರಪ್ಪ, ಮತ್ತು ವಿವಿಧ ಗ್ರಾಮಗಳ ಪಶು ಸಕಿಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ:</strong> ‘ಪ್ರಕೃತಿ ವಿಕೋಪದಿಂದ ಹಾಗೂ ಅಪಘಾತಕ್ಕೀಡಾಗಿ ಸತ್ತರೆ ಪಶು ಸಂಗೋಪನೆ ಇಲಾಖೆಯ ತಂತ್ರಾಂಶ ಸಹಾಯದಿಂದ ರೈತರು ಪರಿಹಾರ ಪಡೆದುಕೊಳ್ಳಬೇಕು’ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗಂಗಾಧರ ತಿಳಿಸಿದರು.</p>.<p>ನಗರದ ಪಶುಸಂಗೋಪನಾ ಆಸ್ಪತ್ರೆಯ ಆವರಣದಲ್ಲಿ ನಡೆದ ಇಲಾಖೆಯ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.</p>.<p>‘ವನ್ಯ ಜೀವಿಗಳ ದಾಳಿಯಿಂದ ದನಕರುಗಳು ಸತ್ತರೆ ₹35 ಸಾವಿರ, ಅರಣ್ಯ ಇಲಾಖೆಯಿಂದ ಹಾಗೂ ವಿದ್ಯುತ್ ಅಪಘಾತದಿಂದ ಸಾವಿಗೀಡಾದರೆ ₹50 ಸಾವಿರ ಪರಿಹಾರಧನ ಜೆಸ್ಕಾಂ ಇಲಾಖೆಯಿಂದ ದೊರೆಯುತ್ತದೆ. ಅಪಘಾತದಲ್ಲಿ ದನಕರುಗಳು ಸತ್ತರೆ ಪರಿಹಾರಧನ ₹15 ಸಾವಿರ ದೊರೆಯುತ್ತದೆ, ಒಂದು ಕುರಿಸತ್ತರೆ ₹7,500ದವರೆಗೆ, ಕುರಿಮರಿ ಸತ್ತರೆ ₹5 ಸಾವಿರ ಪರಿಹಾರಧನ ದೊರೆಯುತ್ತದೆ. ಈ ಬಗ್ಗೆ ನಮ್ಮ ಇಲಾಖೆಯ ಸಿಬ್ಬಂದಿಯು ರೈತರಿಗೆ ಮತ್ತು ಕುರಿಗಾರರಿಗೆ ಮಾಹಿತಿಯನ್ನು ನೀಡಲಾಗಿದೆ’ ಎಂದರು.</p>.<p>ತಾಲ್ಲೂಕಿನಲ್ಲಿ ನಾಯಿಗಳ ಕಡಿತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಿಸಲು ಸಮಾಜ ಸೇವಾ ಸಂಸ್ಥೆಗಳು, ಸ್ಥಳೀಯ ಸರ್ಕಾರಿ ಸಂಸ್ಥೆಗಳ ಸಹಕಾರದೊಂದಿಗೆ ಮಾಡಲು ಅವಕಾಶವಿರುತ್ತದೆ. ನಾಯಿಗಳ ಕಡಿತ ತಪ್ಪಿಸಲು ಸಂತಾನ ಹರಣ ಚಿಕಿತ್ಸೆ ಮಹತ್ವವನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಡಬೇಕು.</p>.<p>ಪಶುಸಂಗೋಪನೆ ಇಲಾಖೆಯ ಮೇಲ್ವಿಚಾರಕ ಟಿ.ಹುಚ್ಚೀರಪ್ಪ, ಪಶುವೈದ್ಯ ಕುಬೇರಪ್ಪ, ಮತ್ತು ವಿವಿಧ ಗ್ರಾಮಗಳ ಪಶು ಸಕಿಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>