<p><strong>ಹೊಸಪೇಟೆ (ವಿಜಯನಗರ):</strong> ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ, ಸಚಿವ ಸಂಪುಟದಲ್ಲಿ ಮತ್ತೆ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.</p><p>ಸಾಧನಾ ಸಮಾವೇಶದ ಸಿದ್ಧತೆಗಳನ್ನು ನೋಡಲು ಶುಕ್ರವಾರ ಇಲ್ಲಿಗೆ ಬಂದಿದ್ದ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.</p><p>ಪಕ್ಷದಲ್ಲಿ ಯಾವುದೇ ಬಣ ಇಲ್ಲ, ಇರುವುದು ಒಂದೇ ಬಣ ಎಂದರು.</p><p>ಸರ್ಕಾರ ಎರಡು ವರ್ಷದ ಸಂಭ್ರಮದಲ್ಲಿದೆ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ 20ನೇ ತಾರೀಕಿನಂದು ಸಾಧನಾ ಸಮಾವೇಶ ಮಾಡುತ್ತೇವೆ ಎಂದರು.</p><p>'5 ಗ್ಯಾರಂಟಿ ಅನುಷ್ಠಾನ ಹಿನ್ನೆಲೆಯಲ್ಲಿ ನಾವು ನಾನಾ ಕಡೆ ಸಮಾವೇಶ ಮಾಡಿದ್ದೇವೆ. ಜನರಲ್ಲಿ ಹೊಸ ಶಕ್ತಿ ತುಂಬಬೇಕು ಎಂಬುದು ಸರ್ಕಾರದ ಚಿಂತನೆಯಾಗಿತ್ತು, ಅದನ್ನು ಸಾಧಿಸಿದ್ದೇವೆ ಎಂದರು.</p><p>'ಕಂದಾಯ ಇಲಾಖೆಯಿಂದ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡ್ತೇವೆ. ಉಳಿದಂತೆ ಸಂಭ್ರಮ, ಆಚರಣೆ ಮಾಡ್ತೇವೆ' ಎಂದು ಹೇಳಿದರು.</p><p><strong>ನವಿಲೆ ಜಲಾಶಯ:</strong> ನವಿಲೆ ಜಲಾಶಯದ ಕುರಿತು ನಾವು ಬಜೆಟ್ ನಲ್ಲಿ ಪ್ರಸ್ತಾಪ ಮಾಡಿದ್ದೇವೆ . ನಾನು ಆಂಧ್ರ ಸಿಎಂ ಜತೆ ಮಾತನಾಡಿದ್ದೇನೆ. ಟೆಕ್ನಿಕಲ್ ಟೀಂ, ಬಂದಿದೆ ಪರಿಶೀಲನೆ ಮಾಡಿದೆ, ನೀರು ಉಳಿಸಿಕೊಳ್ಳೋಕೆ, ಪರ್ಯಾಯ ವ್ಯವಸ್ಥೆ ಮಾಡುತ್ತೇವೆ, ಬಸವಸಾಗರ ಜಲಾಶಯಕ್ಕೆ ನೀರು ಹರಿಸಲು ಮಾಡಲು ಚಿಂತನೆ ನಡೆಸಲಾಗಿದೆ' ಎಂದು ಡಿಸಿಎಂ ಹೇಳಿದರು.</p><p><strong>ಗೇಟ್</strong>: ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಗೇಟ್ ಗಳ ಬದಲಾವಣೆ ಮಾಡುತ್ತೇವೆ, ಮೂರು ರಾಜ್ಯ ಸೇರಿ ಅದನ್ನು ಮಾಡುತ್ತೇವೆ. ಈ ವರ್ಷ ಗೇಟ್ ಬದಲಾವಣೆ ಆಗಲಿಕ್ಕಿಲ್ಲ' ಎಂದರು.</p>.<p><strong>ಕಳಸಾ ಬಂಡೂರಿ-ಪ್ರತ್ಯೇಕ ಸಭೆಯ ಭರವಸೆ:</strong> </p><p>'ಕಳಸಾ ಬಂಡೂರಿ ವಿಚಾರದಲ್ಲಿ ನಾನು ಕೇಂದ್ರದ ನಾಲ್ಕು ಜನ ಸಚಿವರ ಬಳಿ ಮಾತನಾಡಿ ಬಂದಿರುವೆ. ಪ್ರತ್ಯೇಕ ಸಭೆ ಮಾಡುತ್ತೇವೆ ಅಂದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. </p><p>ಸಕ್ಕರೆ ಕಾರ್ಖಾನೆ: ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಯಾರು ಬೇಕಾದ್ರೂ ಹಾಕಲಿ, ರಾಜ್ಯ ಸರ್ಕಾರದಿಂದ ಹಾಕೋಕೆ ಆಗೋಲ್ಲ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ, ಸಚಿವ ಸಂಪುಟದಲ್ಲಿ ಮತ್ತೆ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.</p><p>ಸಾಧನಾ ಸಮಾವೇಶದ ಸಿದ್ಧತೆಗಳನ್ನು ನೋಡಲು ಶುಕ್ರವಾರ ಇಲ್ಲಿಗೆ ಬಂದಿದ್ದ ಅವರು ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.</p><p>ಪಕ್ಷದಲ್ಲಿ ಯಾವುದೇ ಬಣ ಇಲ್ಲ, ಇರುವುದು ಒಂದೇ ಬಣ ಎಂದರು.</p><p>ಸರ್ಕಾರ ಎರಡು ವರ್ಷದ ಸಂಭ್ರಮದಲ್ಲಿದೆ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ 20ನೇ ತಾರೀಕಿನಂದು ಸಾಧನಾ ಸಮಾವೇಶ ಮಾಡುತ್ತೇವೆ ಎಂದರು.</p><p>'5 ಗ್ಯಾರಂಟಿ ಅನುಷ್ಠಾನ ಹಿನ್ನೆಲೆಯಲ್ಲಿ ನಾವು ನಾನಾ ಕಡೆ ಸಮಾವೇಶ ಮಾಡಿದ್ದೇವೆ. ಜನರಲ್ಲಿ ಹೊಸ ಶಕ್ತಿ ತುಂಬಬೇಕು ಎಂಬುದು ಸರ್ಕಾರದ ಚಿಂತನೆಯಾಗಿತ್ತು, ಅದನ್ನು ಸಾಧಿಸಿದ್ದೇವೆ ಎಂದರು.</p><p>'ಕಂದಾಯ ಇಲಾಖೆಯಿಂದ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡ್ತೇವೆ. ಉಳಿದಂತೆ ಸಂಭ್ರಮ, ಆಚರಣೆ ಮಾಡ್ತೇವೆ' ಎಂದು ಹೇಳಿದರು.</p><p><strong>ನವಿಲೆ ಜಲಾಶಯ:</strong> ನವಿಲೆ ಜಲಾಶಯದ ಕುರಿತು ನಾವು ಬಜೆಟ್ ನಲ್ಲಿ ಪ್ರಸ್ತಾಪ ಮಾಡಿದ್ದೇವೆ . ನಾನು ಆಂಧ್ರ ಸಿಎಂ ಜತೆ ಮಾತನಾಡಿದ್ದೇನೆ. ಟೆಕ್ನಿಕಲ್ ಟೀಂ, ಬಂದಿದೆ ಪರಿಶೀಲನೆ ಮಾಡಿದೆ, ನೀರು ಉಳಿಸಿಕೊಳ್ಳೋಕೆ, ಪರ್ಯಾಯ ವ್ಯವಸ್ಥೆ ಮಾಡುತ್ತೇವೆ, ಬಸವಸಾಗರ ಜಲಾಶಯಕ್ಕೆ ನೀರು ಹರಿಸಲು ಮಾಡಲು ಚಿಂತನೆ ನಡೆಸಲಾಗಿದೆ' ಎಂದು ಡಿಸಿಎಂ ಹೇಳಿದರು.</p><p><strong>ಗೇಟ್</strong>: ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಗೇಟ್ ಗಳ ಬದಲಾವಣೆ ಮಾಡುತ್ತೇವೆ, ಮೂರು ರಾಜ್ಯ ಸೇರಿ ಅದನ್ನು ಮಾಡುತ್ತೇವೆ. ಈ ವರ್ಷ ಗೇಟ್ ಬದಲಾವಣೆ ಆಗಲಿಕ್ಕಿಲ್ಲ' ಎಂದರು.</p>.<p><strong>ಕಳಸಾ ಬಂಡೂರಿ-ಪ್ರತ್ಯೇಕ ಸಭೆಯ ಭರವಸೆ:</strong> </p><p>'ಕಳಸಾ ಬಂಡೂರಿ ವಿಚಾರದಲ್ಲಿ ನಾನು ಕೇಂದ್ರದ ನಾಲ್ಕು ಜನ ಸಚಿವರ ಬಳಿ ಮಾತನಾಡಿ ಬಂದಿರುವೆ. ಪ್ರತ್ಯೇಕ ಸಭೆ ಮಾಡುತ್ತೇವೆ ಅಂದಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. </p><p>ಸಕ್ಕರೆ ಕಾರ್ಖಾನೆ: ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆಯನ್ನು ಯಾರು ಬೇಕಾದ್ರೂ ಹಾಕಲಿ, ರಾಜ್ಯ ಸರ್ಕಾರದಿಂದ ಹಾಕೋಕೆ ಆಗೋಲ್ಲ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>