ನೆಲ, ಜಲ, ಪ್ರಾದೇಶಿಕ ಅಸ್ಮಿತೆ, ಜನಪರ ರಾಜಕಾರಣಕ್ಕಾಗಿ ರೈತರು, ದಲಿತರು, ಜನಪರ ಚಳವಳಿಯಲ್ಲಿ ತೊಡಗಿಸಿಕೊಂಡವರನ್ನು ಸೇರಿಸಿಕೊಂಡು ಹೊಸ ವೇದಿಕೆ ರಚಿಸಲಾಗುವುದು. ಐ.ಟಿ., ಬಿ.ಟಿ., ಕೃಷಿ ಸೇರಿದಂತೆ ಇತರೆ ವಲಯಗಳಲ್ಲಿ ಅನೇಕರು ಜನಪರ ಧೋರಣೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಸಮಾಜದ ಬಗ್ಗೆ ಕಾಳಜಿ ಹೊಂದಿದವರನ್ನು ಗುರುತಿಸಿ ಚುನಾವಣೆಗೆ ನಿಲ್ಲಿಸಲಾಗುವುದು ಎಂದರು.