ನಾನು ಐದೇ ವರ್ಷದಲ್ಲಿ ಈ ಕೃತಿ ರಚಿಸಿ ಮುಗಿಸಿದ್ದೆ. ಪ್ರಕಾಶನ ಮಾತ್ರ ಸಾಧ್ಯವಾಗಲಿಲ್ಲ. ಎತ್ನಳ್ಳಿ ಮಲ್ಲಯ್ಯ ಅವಿರತ ಶ್ರಮ ಹಾಕಿದ್ದರಿಂದಲೇ ನನ್ನ ಇಳಿಗಾಲದಲ್ಲಿ ಈ ಕೃತಿ ಹೊರಬರುವುದು ಸಾಧ್ಯವಾಯಿತು
–ರಂಗೋಪಂತ ನಾಗರಾಜರಾಯರು ಕೃತಿಕಾರ
ಭಾಮಿನಿ ಷಟ್ಪದಿಯಲ್ಲಿರುವ ಮಹಾಕಾವ್ಯಗಳ ಮೇಲೆ ಉಪನ್ಯಾಸ ನೀಡುವ ಗಮಕ ವಾಚನ ಮಾಡುವವರ ಸಂಖ್ಯೆ ಹೆಚ್ಚಬೇಕಾಗಿದೆ ಇಲ್ಲವಾದರೆ ಈ ಮಹಾಕಾವ್ಯ ಸಂಪ್ರದಾಯ ನಶಿಸಿ ಹೋಗುವ ಅಪಾಯ ಇದೆ