<p><strong>ಹೊಸಪೇಟೆ (ವಿಜಯನಗರ):</strong> ‘ಬುದ್ಧಿಜೀವಿಗಳನ್ನು ಲದ್ದಿಜೀವಿಗಳು, ಗಂಜಿ ಗಿರಾಕಿಗಳು ಎಂದು ಹಂಗಿಸುವವರಿಗೆ ಮತ್ತು ಜಾತಿವಾದಿಗಳಿಗೆ ಬುದ್ಧಿಜೀವಿಗಳ ಬಗ್ಗೆ ಭಯವಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಹೇಳಿದರು.</p>.<p>ಅಕಾಡೆಮಿ ವತಿಯಿಂದ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲಬುರಗಿ ವಿಭಾಗ ಮಟ್ಟದ ಯುವ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜ ಕಟ್ಟುವ ಬುದ್ಧಿಜೀವಿಗಳನ್ನು ಮತ್ತು ಬರಹಗಾರರನ್ನು ಬೇರೆ ಬೇರೆ ಕಾರಣಕ್ಕೆ ಗುರಿಪಡಿಸಲಾಗುತ್ತದೆ’ ಎಂದರು.</p>.<p>‘ಸಂವಿಧಾನ, ಸೌಹಾರ್ದದ ಪರ ಮಾತನಾಡುವವರನ್ನು ಉಳಿಸಬಾರದು ಎಂಬ ಸ್ಥಿತಿ ಇದೆ. ಲೇಖಕರ ಮೇಲೆ ಹಲ್ಲೆ ಕೊಲೆಗಳು ಆಗುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಈಗ ಯುವ ಕವಿಗಳು ಪ್ರೀತಿ, ಪ್ರೇಮ, ಪ್ರಣಯದ ವಿಷಯಗಳಿಗಿಂತ ಕಾಲದ ಮನೋಧರ್ಮಕ್ಕೆ ಸ್ಪಂದಿಸುತ್ತಾರೆ. ಅಂಥವರಿಗೆ ತೊಂದರೆಯಾದರೆ ಯಾರು ಹೊಣೆ? ಅವರನ್ನು ಪ್ರೋತ್ಸಾಹಿಸಬೇಕಾದ ಹಿರಿಯರು ಹೊಣೆಗೇಡಿಗಳು ಆಗಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ‘ಬುದ್ಧಿಜೀವಿಗಳನ್ನು ಲದ್ದಿಜೀವಿಗಳು, ಗಂಜಿ ಗಿರಾಕಿಗಳು ಎಂದು ಹಂಗಿಸುವವರಿಗೆ ಮತ್ತು ಜಾತಿವಾದಿಗಳಿಗೆ ಬುದ್ಧಿಜೀವಿಗಳ ಬಗ್ಗೆ ಭಯವಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಹೇಳಿದರು.</p>.<p>ಅಕಾಡೆಮಿ ವತಿಯಿಂದ ಇಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲಬುರಗಿ ವಿಭಾಗ ಮಟ್ಟದ ಯುವ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜ ಕಟ್ಟುವ ಬುದ್ಧಿಜೀವಿಗಳನ್ನು ಮತ್ತು ಬರಹಗಾರರನ್ನು ಬೇರೆ ಬೇರೆ ಕಾರಣಕ್ಕೆ ಗುರಿಪಡಿಸಲಾಗುತ್ತದೆ’ ಎಂದರು.</p>.<p>‘ಸಂವಿಧಾನ, ಸೌಹಾರ್ದದ ಪರ ಮಾತನಾಡುವವರನ್ನು ಉಳಿಸಬಾರದು ಎಂಬ ಸ್ಥಿತಿ ಇದೆ. ಲೇಖಕರ ಮೇಲೆ ಹಲ್ಲೆ ಕೊಲೆಗಳು ಆಗುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದರು.</p>.<p>‘ಈಗ ಯುವ ಕವಿಗಳು ಪ್ರೀತಿ, ಪ್ರೇಮ, ಪ್ರಣಯದ ವಿಷಯಗಳಿಗಿಂತ ಕಾಲದ ಮನೋಧರ್ಮಕ್ಕೆ ಸ್ಪಂದಿಸುತ್ತಾರೆ. ಅಂಥವರಿಗೆ ತೊಂದರೆಯಾದರೆ ಯಾರು ಹೊಣೆ? ಅವರನ್ನು ಪ್ರೋತ್ಸಾಹಿಸಬೇಕಾದ ಹಿರಿಯರು ಹೊಣೆಗೇಡಿಗಳು ಆಗಿದ್ದೇವೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>