<p><strong>ಹೊಸಪೇಟೆ (ವಿಜಯನಗರ):</strong> ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಇಲ್ಲಿನ ವಿಜಯನಗರ ಕಾಲೇಜ್ನಲ್ಲಿ ಸರ್ವ ಸಂಘಗಳ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಗುರುವಾರ ನಡೆಯಿತು.</p>.<p>ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿ, ‘ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬದುಕಿನ ಯಶಸ್ಸಿಗೆ ದಾರಿದೀಪ. ಬದುಕಿನ ನಿಜವಾದ ಯಶಸ್ಸು ಎಂದರೆ ಸಂತೋಷವಾಗಿರುವುದು’ ಎಂದರು.</p>.<p>ಇಂಗ್ಲಿಷ್ ಲ್ಯಾಬ್ ಮತ್ತು ಟ್ಯಾಲಿ ಕಾರ್ಯಕ್ರಮಗಳಲ್ಲಿ ಕೋರ್ಸ್ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಎರಡು ಕೋರ್ಸ್ಗಳನ್ನು ವಿಜಯನಗರ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಸಂವಹನ ಕೌಶಲ ಮತ್ತು ಉಚ್ಚಾರಣಾ ಕೌಶಲವನ್ನು ಸುಧಾರಿಸಲು ಭಾಷಾ ಪ್ರಯೋಗಾಲಯದಲ್ಲಿ 50 ಕಂಪ್ಯೂಟರ್ಗಳನ್ನು ಸ್ಥಾಪಿಸಲಾಗಿದೆ. ವಾಣಿಜ್ಯ ಪ್ರಯೋಗಾಲಯದಲ್ಲಿ 33 ಕಂಪ್ಯೂಟರ್ಗಳು ವಿದ್ಯಾರ್ಥಿಗಳಿಗೆ ಟ್ಯಾಲಿ ಕಾರ್ಯಕ್ರಮದಲ್ಲಿ ತರಬೇತಿ ನೀಡುತ್ತಿವೆ ಎಂದರು.</p>.<p>ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಮಲ್ಲಿಕಾರ್ಜುನ ಮೆಟ್ರಿ ಅಧ್ಯಕ್ಷತೆ ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ರವಿಕಿರಣ ಡಿ., ಪ್ರಾಚಾರ್ಯ ಪ್ರೊ.ಎಂ. ಪ್ರಭುಗೌಡ ಮಾತನಾಡಿದರು. ಕಾಲೇಜಿನ 18 ವಿದ್ಯಾರ್ಥಿಗಳು ವಾರ್ಷಿಕ ₹5.1 ಲಕ್ಷವರೆಗಿನ ವೇತನ ಪ್ಯಾಕೇಜ್ನೊಂದಿಗೆ ವಿವಿಧ ಕಂಪನಿಗಳಿಗೆ ಆಯ್ಕೆಯಾದ ಮಾಹಿತಿ ನೀಡಲಾಯಿತು.</p>.<p>ವೀ.ವಿ. ಸಂಘದ ಅಧ್ಯಕ್ಷ ಕಣೆಕಲ್ ಮಹಾಂತೇಶ್, ಕಾರ್ಯದರ್ಶಿ ಅರವಿಂದ್ ಪಟೇಲ್, ಆಡಳಿತ ಮಂಡಳಿಯ ಸದಸ್ಯ ಕಾಮರೆಡ್ಡಿ ಚಂದ್ರಶೇಖರ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಇಲ್ಲಿನ ವಿಜಯನಗರ ಕಾಲೇಜ್ನಲ್ಲಿ ಸರ್ವ ಸಂಘಗಳ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಗುರುವಾರ ನಡೆಯಿತು.</p>.<p>ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿ, ‘ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬದುಕಿನ ಯಶಸ್ಸಿಗೆ ದಾರಿದೀಪ. ಬದುಕಿನ ನಿಜವಾದ ಯಶಸ್ಸು ಎಂದರೆ ಸಂತೋಷವಾಗಿರುವುದು’ ಎಂದರು.</p>.<p>ಇಂಗ್ಲಿಷ್ ಲ್ಯಾಬ್ ಮತ್ತು ಟ್ಯಾಲಿ ಕಾರ್ಯಕ್ರಮಗಳಲ್ಲಿ ಕೋರ್ಸ್ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಎರಡು ಕೋರ್ಸ್ಗಳನ್ನು ವಿಜಯನಗರ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ಸಂವಹನ ಕೌಶಲ ಮತ್ತು ಉಚ್ಚಾರಣಾ ಕೌಶಲವನ್ನು ಸುಧಾರಿಸಲು ಭಾಷಾ ಪ್ರಯೋಗಾಲಯದಲ್ಲಿ 50 ಕಂಪ್ಯೂಟರ್ಗಳನ್ನು ಸ್ಥಾಪಿಸಲಾಗಿದೆ. ವಾಣಿಜ್ಯ ಪ್ರಯೋಗಾಲಯದಲ್ಲಿ 33 ಕಂಪ್ಯೂಟರ್ಗಳು ವಿದ್ಯಾರ್ಥಿಗಳಿಗೆ ಟ್ಯಾಲಿ ಕಾರ್ಯಕ್ರಮದಲ್ಲಿ ತರಬೇತಿ ನೀಡುತ್ತಿವೆ ಎಂದರು.</p>.<p>ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಮಲ್ಲಿಕಾರ್ಜುನ ಮೆಟ್ರಿ ಅಧ್ಯಕ್ಷತೆ ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ರವಿಕಿರಣ ಡಿ., ಪ್ರಾಚಾರ್ಯ ಪ್ರೊ.ಎಂ. ಪ್ರಭುಗೌಡ ಮಾತನಾಡಿದರು. ಕಾಲೇಜಿನ 18 ವಿದ್ಯಾರ್ಥಿಗಳು ವಾರ್ಷಿಕ ₹5.1 ಲಕ್ಷವರೆಗಿನ ವೇತನ ಪ್ಯಾಕೇಜ್ನೊಂದಿಗೆ ವಿವಿಧ ಕಂಪನಿಗಳಿಗೆ ಆಯ್ಕೆಯಾದ ಮಾಹಿತಿ ನೀಡಲಾಯಿತು.</p>.<p>ವೀ.ವಿ. ಸಂಘದ ಅಧ್ಯಕ್ಷ ಕಣೆಕಲ್ ಮಹಾಂತೇಶ್, ಕಾರ್ಯದರ್ಶಿ ಅರವಿಂದ್ ಪಟೇಲ್, ಆಡಳಿತ ಮಂಡಳಿಯ ಸದಸ್ಯ ಕಾಮರೆಡ್ಡಿ ಚಂದ್ರಶೇಖರ್ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>