<p>ಹೊಸಪೇಟೆ (ವಿಜಯನಗರ): ಅಸಂಖ್ಯಾತ ಹಿಂದುಳಿದ ಜಾತಿಗಳ ಹಿತದೃಷ್ಠಿಯಿಂದ ಸರ್ಕಾರವು ಕೂಡಲೇ ಜಾತಿವಾರು ನಿಗಮಗಳನ್ನು ವಿಸರ್ಜಿಸಿ ಈ ಮೊದಲು ಇದ್ದಂತೆ ಎಲ್ಲಾ ಒಬಿಸಿ ಜಾತಿಗಳನ್ನು ದೇವರಾಜ ಅರಸು ನಿಗಮಗಳಲ್ಲಿ ವಿಲೀನಗೊಳಿಸಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.</p>.<p>ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಿದ್ದ ವೇಳೆ ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್ ಅವರು ಮನವಿ ಸಲ್ಲಿಸಿ ಈ ಒತ್ತಾಯ ಮಾಡಿದ್ದಾರೆ.</p>.<p>ದೇವರಾಜ ಅರಸು ನಿಗಮದ ವ್ಯಾಪ್ತಿಯಲ್ಲಿದ್ಧಾಗ ಪ್ರತಿಯೊಂದು ಜಾತಿಗಳಿಗೆ ಈ ಹಿಂದೆ ತಾಲ್ಲೂಕಿನಲ್ಲಿ 15 ರಿಂದ 20 ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ ದೊರೆಯುತ್ತಿತ್ತು. ಆದರೆ ಪ್ರತ್ಯೇಕ ನಿಗಮ ರಚನೆಯ ನಂತರ 2 ಅಥವಾ 3 ಮಂದಿಗಷ್ಟೇ ಸೌಲಭ್ಯ ದೊರೆಯುತ್ತಿದೆ. ನಿರುದ್ಯೋಗಿಗಳು ಸಾಲ ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p>.<p>ರಾಜ್ಯ ದೇವರಾಜ ಅರಸು ಹಿಂದುಳಿದ ವರ್ಗಗಳ ಒಕ್ಕೂಟದ ಉಪಾಧ್ಯಕ್ಷ ಯು.ಆಂಜನೇಯಲು, ಅಲೆಮಾರಿ ಸಮುದಾಯಗಳ ಮುಖಂಡ ಸಣ್ಣಮಾರೆಪ್ಪ, ಕರಿಯಪ್ಪ ಗುಡಿಮನಿ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸಪೇಟೆ (ವಿಜಯನಗರ): ಅಸಂಖ್ಯಾತ ಹಿಂದುಳಿದ ಜಾತಿಗಳ ಹಿತದೃಷ್ಠಿಯಿಂದ ಸರ್ಕಾರವು ಕೂಡಲೇ ಜಾತಿವಾರು ನಿಗಮಗಳನ್ನು ವಿಸರ್ಜಿಸಿ ಈ ಮೊದಲು ಇದ್ದಂತೆ ಎಲ್ಲಾ ಒಬಿಸಿ ಜಾತಿಗಳನ್ನು ದೇವರಾಜ ಅರಸು ನಿಗಮಗಳಲ್ಲಿ ವಿಲೀನಗೊಳಿಸಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.</p>.<p>ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದಿದ್ದ ವೇಳೆ ಒಕ್ಕೂಟದ ಅಧ್ಯಕ್ಷ ವೈ.ಯಮುನೇಶ್ ಅವರು ಮನವಿ ಸಲ್ಲಿಸಿ ಈ ಒತ್ತಾಯ ಮಾಡಿದ್ದಾರೆ.</p>.<p>ದೇವರಾಜ ಅರಸು ನಿಗಮದ ವ್ಯಾಪ್ತಿಯಲ್ಲಿದ್ಧಾಗ ಪ್ರತಿಯೊಂದು ಜಾತಿಗಳಿಗೆ ಈ ಹಿಂದೆ ತಾಲ್ಲೂಕಿನಲ್ಲಿ 15 ರಿಂದ 20 ನಿರುದ್ಯೋಗಿಗಳಿಗೆ ಸಾಲ ಸೌಲಭ್ಯ ದೊರೆಯುತ್ತಿತ್ತು. ಆದರೆ ಪ್ರತ್ಯೇಕ ನಿಗಮ ರಚನೆಯ ನಂತರ 2 ಅಥವಾ 3 ಮಂದಿಗಷ್ಟೇ ಸೌಲಭ್ಯ ದೊರೆಯುತ್ತಿದೆ. ನಿರುದ್ಯೋಗಿಗಳು ಸಾಲ ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p>.<p>ರಾಜ್ಯ ದೇವರಾಜ ಅರಸು ಹಿಂದುಳಿದ ವರ್ಗಗಳ ಒಕ್ಕೂಟದ ಉಪಾಧ್ಯಕ್ಷ ಯು.ಆಂಜನೇಯಲು, ಅಲೆಮಾರಿ ಸಮುದಾಯಗಳ ಮುಖಂಡ ಸಣ್ಣಮಾರೆಪ್ಪ, ಕರಿಯಪ್ಪ ಗುಡಿಮನಿ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>