ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎನ್.ಕಾಳಿದಾಸ್ ಮಾತನಾಡಿ, ಈಚೆಗೆ ಭಾರೀ ಗಾಳಿ, ಮಳೆಯಿಂದ ಹೊಸಪೇಟೆ ಸುತ್ತಮುತ್ತಲಿನಲ್ಲಿ 2,800 ಹೆಕ್ಟೇರ್ನಷ್ಟು ಬಾಳೆ ತೋಟ ನಾಶವಾಗಿದೆ. ಆದರೆ ಜಿಲ್ಲಾಡಳಿತ 188 ಹೆಕ್ಟೇರ್ ಮಾತ್ರ ಹಾನಿ ಸಂಭವಿಸಿದೆ ಎಂದು ಹೇಳುತ್ತಿದೆ. ಬಾಳೆ ಕೃಷಿಗೆ ಎಕರೆಗೆ ₹1.50 ಲಕ್ಷಕ್ಕಿಂತ ಅಧಿಕ ವೆಚ್ಚ ಬೀಳುತ್ತಿದೆ. ಹೀಗಾಗಿ ಪರಿಹಾರ ರೂಪದಲ್ಲಿ ಹೆಕ್ಟೇರ್ಗೆ ನೀಡುವ ₹25 ಸಾವಿರ ಏನೇನೂ ಸಾಲದು, ಅದನ್ನು ಕನಿಷ್ಠ ₹80 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.