ಸಂಡೂರು ತಾಲ್ಲೂಕು ಯಶವಂತ ನಗರದ ಅಂಜಿ ಅಜಯಕುಮಾರ (22) ಮೃತರು. ಬೆಂಗಳೂರಿನ ಕಾಲೇಜವೊಂದರಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದು, ನಂದಿಬೇವೂರು ಗ್ರಾಮದಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದರು. ಭಾನುವಾರ ಅಜಯ್ ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದ. ಗೆಳೆಯರು ಕೆರೆ ದಡದ ಮೇಲೆ ಕುಳಿತಿದ್ದಾಗ, ನೀರಿಗಿಳಿದು ಈಜು ಕಲಿಯುತ್ತಿದ್ದಾಗ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.