ಕಳೆದ ಕೆಲವು ದಿನಗಳಿಂದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಸತತವಾಗಿ ಇಳಿಮುಖವಾಗುತ್ತಿರುವುದೇ ಇದಕ್ಕೆ ಕಾರಣ. ನದಿ ತೀರಕ್ಕೆ ಹೊಂದಿಕೊಂಡಿರುವ ಪುರಂದರದಾಸರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆಯ ಮೇಲ್ಭಾಗ ಕಂಡರೆ, ಸ್ನಾನಘಟ್ಟ, ಚಕ್ರತೀರ್ಥದ ಮಂಟಪಗಳು, ಕೋದಂಡರಾಮ ದೇವಸ್ಥಾನದ ಆವರಣದಿಂದ ನೀರು ಹಿಂದೆ ಸರಿದಿದೆ. ಪ್ರವಾಸಿಗರು, ಭಕ್ತರು ಯಾವುದೇ ಅಡೆತಡೆಯಿಲ್ಲದೇ ಸ್ಮಾರಕ, ದೇವರ ದರ್ಶನ ಪಡೆಯುತ್ತಿದ್ದಾರೆ.