ವಿಜಯನಗರ ಜಿಲ್ಲೆ ಹೂವಿನ ಹಡಗಲಿ ಪಟ್ಟಣದಲ್ಲಿ ಹಜರತ್ ರಾಜಾಬಾಗ್ ಸವಾರ್ ಉರೂಸ್ ಶನಿವಾರ ಶ್ರದ್ಧೆ, ಭಕ್ತಿಯಿಂದ ನಡೆಯಿತು. ಸೂಫಿ ಸಂತ ಹಜರತ್ ತಾಜುದ್ದೀನ್ ಬಾಬಾ ಅವರಿಗೆ ಯಮನೂರು ಸ್ವಾಮಿ ಎಂಬ ಹೆಸರೂ ಇದೆ. ಅವರು ಭೇಟಿ ನೀಡಿದ ಈ ತಾಣದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಏಕಕಾಲದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಭಾವೈಕ್ಯದ ಸಂದೇಶ ಸಾರುತ್ತಾರೆ.